ವೈದ್ಯರೇ ಆಗಿರಬೇಕು ಎಂದೇನಿಲ್ಲ:
‘ಅಪಘಾತಕ್ಕೀಡಾಗಿ ಮೃತಪಟ್ಟ ಪ್ರಾಣಿಗಳನ್ನು ರಸ್ತೆಬದಿಗೆ ಒಯ್ದಿಡಲು ವೈದ್ಯರೇ ಆಗಿರಬೇಕು ಎಂದೇನಿಲ್ಲ. ಪರಿಸರ ಕಾಳಜಿ ಹೊಂದಿದ ಯಾರಾದರೂ ಈ ಕೆಲಸ ಮಾಡಬಹುದು. ಆದರೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಅಥವಾ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಬೇಕು. ಕಾಗದ ಪ್ಲಾಸ್ಟಿಕ್ ಅಥವಾ ಬಟ್ಟೆ ಬಳಸಿ ಬಾಲ ಹಿಡಿದುಕೊಂಡು ಪ್ರಾಣಿಯನ್ನು ರಸ್ತೆಬದಿಗೆ ಎಳೆದು ತರಬೇಕು. ನಂತರ ಸೋಪಿನಿಂದ ಕೈಗಳನ್ನು ತೊಳೆದುಕೊಂಡರೆ ಸಾಕು’ ಎನ್ನುತ್ತಾರೆ ಮಹಾಂತೇಶ ರಾಮಣ್ಣವರ.