<p><strong>ಗೋಕಾಕ: </strong>ತಾಲ್ಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಬಿ.ಬಿ. ಮಮದಾಪೂರ ಇಕೊ ಕ್ಲಬ್ ಹಾಗೂ ಗ್ರಾಮೀಣ ಶಾಲಾ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ‘ಜ್ಞಾನಾಕ್ಷಯ–ಚಿಂತಕರ ಚಾವಡಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.</p>.<p>ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು, ವಿಜ್ಞಾನ, ವೈಚಾರಿಕತೆ, ಆರೋಗ್ಯ, ಸಾಹಿತ್ಯ, ಸಂಸ್ಕೃತಿ, ಕಲೆ ಒಳಗೊಂಡಂತೆ ಹಲವಾರು ಪಾಕ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಈ ಕಾರ್ಯಕ್ರಮದ ಮೂಲಕ ಹೊಂದಲಾಗಿದೆ.</p>.<p>ಉದ್ಘಾಟಿಸಿದ ಗೋಕಾಕ ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಗ್ರಾ.ಪಂ. ಸದಸ್ಯೆ ವಿದ್ಯಾಶ್ರೀ ಕಮತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಖನಗಾಂವಿ, ಶಿಕ್ಷಕಿಯರಾದ ಶೀಲಾ ಐನಾಪೂರ, ಸುಶೀಲಾ ಕುಂಬಾರ, ನಿರ್ಮಲಾ ಬೆಲ್ಲದ, ಭಾರತಿ ಜೋಡಂಗಿ, ಆಸ್ಮಾ ಮಿರ್ಜಾನಾಯಿಕ ಪಾಲ್ಗೊಂಡಿದ್ದರು.</p>.<p>ಸುಷ್ಮಿತಾ ಪೂಜೇರಿ ಮತ್ತು ಸೌಂದರ್ಯಾ ಚಿಕ್ಕೋಡಿ ವಿಜ್ಞಾನ ಗೀತೆ ಪ್ರಸ್ತುತಪಡಿಸಿದರು.</p>.<p>ಕಾರ್ಯಕ್ರಮ ಸಂಚಾಲಕ ಆರ್.ವಿ. ದೇಮಶೆಟ್ಟಿ ನಿರೂಪಿಸಿದರು. ಪ್ರೀತಿ ಬ್ಯಾಹಟ್ಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ: </strong>ತಾಲ್ಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಬಿ.ಬಿ. ಮಮದಾಪೂರ ಇಕೊ ಕ್ಲಬ್ ಹಾಗೂ ಗ್ರಾಮೀಣ ಶಾಲಾ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ‘ಜ್ಞಾನಾಕ್ಷಯ–ಚಿಂತಕರ ಚಾವಡಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.</p>.<p>ಮನೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು, ವಿಜ್ಞಾನ, ವೈಚಾರಿಕತೆ, ಆರೋಗ್ಯ, ಸಾಹಿತ್ಯ, ಸಂಸ್ಕೃತಿ, ಕಲೆ ಒಳಗೊಂಡಂತೆ ಹಲವಾರು ಪಾಕ್ಷಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶವನ್ನು ಈ ಕಾರ್ಯಕ್ರಮದ ಮೂಲಕ ಹೊಂದಲಾಗಿದೆ.</p>.<p>ಉದ್ಘಾಟಿಸಿದ ಗೋಕಾಕ ವಲಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಗ್ರಾ.ಪಂ. ಸದಸ್ಯೆ ವಿದ್ಯಾಶ್ರೀ ಕಮತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಖನಗಾಂವಿ, ಶಿಕ್ಷಕಿಯರಾದ ಶೀಲಾ ಐನಾಪೂರ, ಸುಶೀಲಾ ಕುಂಬಾರ, ನಿರ್ಮಲಾ ಬೆಲ್ಲದ, ಭಾರತಿ ಜೋಡಂಗಿ, ಆಸ್ಮಾ ಮಿರ್ಜಾನಾಯಿಕ ಪಾಲ್ಗೊಂಡಿದ್ದರು.</p>.<p>ಸುಷ್ಮಿತಾ ಪೂಜೇರಿ ಮತ್ತು ಸೌಂದರ್ಯಾ ಚಿಕ್ಕೋಡಿ ವಿಜ್ಞಾನ ಗೀತೆ ಪ್ರಸ್ತುತಪಡಿಸಿದರು.</p>.<p>ಕಾರ್ಯಕ್ರಮ ಸಂಚಾಲಕ ಆರ್.ವಿ. ದೇಮಶೆಟ್ಟಿ ನಿರೂಪಿಸಿದರು. ಪ್ರೀತಿ ಬ್ಯಾಹಟ್ಟಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>