ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಪಿಂಚಣಿ ಯೋಜನೆ ಮುಂದುವರಿಕೆಗೆ ಆಗ್ರಹ

Last Updated 17 ಅಕ್ಟೋಬರ್ 2020, 14:52 IST
ಅಕ್ಷರ ಗಾತ್ರ

ರಾಯಬಾಗ: ಹಳೆ ಪಿಂಚಣಿ ಯೋಜನೆಯನ್ನೆ ಮುಂದುವರಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕದವರು ರಾಯಬಾಗ ಶಾಸಕ ಡಿ.ಎಂ. ಐಹೊಳೆ ಅವರಿಗೆ ಮನವಿ ಸಲ್ಲಿಸಿದರು.

‘ಪಿಂಚಣಿ ಎನ್ನುವುದು ನೌಕರರ ಜೀವನದ ಸಂಧ್ಯಾಕಾಲದ ಹಕ್ಕಾಗಿದೆ. ಹೀಗಾಗಿ ಕೂಡಲೇ ನೂತನ ಪಿಂಚಣಿ (ಎನ್‌ಪಿಎಸ್)ಯನ್ನು ರದ್ದುಪಡಿಸಿ ಹಳೆ ಯೋಜನೆಯನ್ನು ಜಾರಿಗೆ ತಂದು, ನೌಕರರ ಅವಲಂಬಿತರ ಹಿತಾಸಕ್ತಿ ಕಾಪಾಡಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ವಿಶ್ವನಾಥ ಹಾರೂಗೇರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಬಿ. ಅರಗೆ, ಪ್ರಧಾನ ಕಾರ್ಯದರ್ಶಿ ಡಿ.ವಿ. ನಾಯಿಕ ಪಾಟೀಲ, ಬಿ.ಎಲ್. ಘಂಟಿ, ಬಿ.ಸಿ. ಯಡವನ್ನವರ, ಎಸ್.ಡಿ. ರಾಯಮಾನೆ, ಎಂ.ಸಿ. ಐಹೊಳೆ, ಸುಲೇಮಾನ ಶೇಖ, ದಿಲೀಪ ಹಾರೂಗೇರಿ, ಬಸನಗೌಡ ಪಾಟೀಲ, ಶ್ರೀಧರ ಚೌಗಲಾ, ಮೋಹನ ರಾಜಮಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT