ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಅಂತರರಾಜ್ಯ ಪ್ರವೇಶ ನಿರ್ಬಂಧ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನೆರೆಯ ಮಹಾರಾಷ್ಟ್ರದ ಮೂವರನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಅವರಿಂದ ಐದು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಅವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಶಿವನಾಯಕವಾಡ ಮತ್ತು ಇಂಚಲಕರಂಜಿಯಿಂದ ಅನಧಿಕೃತವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶಿವನಾಯಕವಾಡಿಯ ದತ್ತಾತ್ರೇಯ ಖೋತ, ಅಣ್ಣಾಸೋ ಖೋತ, ಇಚಲಕರಂಜಿಯ ಮಹೇಶ ಬರಬರೆ, ದಿನೇಶ ಮೋರಯಾ ಹಾಗೂ ಶಿರೋಳ ತಾಲ್ಲೂಕು ಯಡ್ರಾಂವದ ವಿಜಯಕುಮಾರ ಪಾಟೀಲ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.