<p>ಅಥಣಿ: ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾದ ದಿನಸಿ ಕಿಟ್ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು.</p>.<p>ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಕಾರ್ಮಿಕರಿಗೆ ಸೌಲಭ್ಯ ನೀಡಲಾಯಿತು. 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಸಕ್ಕರೆ, ಬೇಳೆ, ಎಣ್ಣೆ ಸೇರಿದಂತೆ ಕೆಲವು ಸಾಂಬಾರು ಪದಾರ್ಥಗಳನ್ನು ಕೊಡಲಾಯಿತು.</p>.<p>‘ಕೊರೊನಾ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳು ಬಡ ಕುಟುಂಬಗಳಿಗೆ ನೆರವಾಗುತ್ತಿವೆ. ಸರ್ಕಾರ ಜನರ ನೆರವಿಗೆ ಧಾವಿಸಿದೆ. ಯಾವುದೇ ಭಯ ಬೇಡ’ ಎಂದು ಕುಮಠಳ್ಳಿ ಹೇಳಿದರು.</p>.<p>‘ಕೊರೊನಾ ಮೇಲೆರಗು ಎತ್ತಿದ್ದಂತೆ. ಎತ್ತಿನ ಮೈಸವರಿದರೆ ಸಮಾಧಾನಗೊಳ್ಳುತ್ತದೆ. ಅಂತೆಯೇ ಕೊರೊನಾ ಬಗ್ಗೆಯೂ ಎಚ್ಚರವಾಗಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳಿಂದ ಈ ಸೋಂಕಿನಿಂದ ದೂರವಿರಬಹುದು. ಈ ರೋಗಕ್ಕೆ ಆದಷ್ಟು ಬೇಗನೆ ಔಷಧ ಸಿಗಲೆಂದು ಶಿವಯೋಗಿಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.</p>.<p>ಪಿಎಸ್ಐ ಕುಮಾರ ಹಾಡಕಾರ, ಅಥಣಿ ಕಾರ್ಮಿಕ ನಿರೀಕ್ಷಕ ಜಿ.ಬಿ. ಧೂಪದಾಳ, ಕೆಎಫ್ಸಿಯ ಎನ್.ಎನ್. ಗಾಣಿಗೇರ, ಶಶಿಕಾಂತ ಸಾಳವೆ, ವಿನಯ ಪಾಟೀಲ, ಅನಿಲ ಸೌದಾಗರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಥಣಿ: ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾದ ದಿನಸಿ ಕಿಟ್ಗಳನ್ನು ಶಾಸಕ ಮಹೇಶ ಕುಮಠಳ್ಳಿ ಶುಕ್ರವಾರ ವಿತರಿಸಿದರು.</p>.<p>ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 500 ಕಾರ್ಮಿಕರಿಗೆ ಸೌಲಭ್ಯ ನೀಡಲಾಯಿತು. 5 ಕೆ.ಜಿ. ಅಕ್ಕಿ, ತಲಾ ಒಂದು ಕೆ.ಜಿ. ಸಕ್ಕರೆ, ಬೇಳೆ, ಎಣ್ಣೆ ಸೇರಿದಂತೆ ಕೆಲವು ಸಾಂಬಾರು ಪದಾರ್ಥಗಳನ್ನು ಕೊಡಲಾಯಿತು.</p>.<p>‘ಕೊರೊನಾ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳು ಬಡ ಕುಟುಂಬಗಳಿಗೆ ನೆರವಾಗುತ್ತಿವೆ. ಸರ್ಕಾರ ಜನರ ನೆರವಿಗೆ ಧಾವಿಸಿದೆ. ಯಾವುದೇ ಭಯ ಬೇಡ’ ಎಂದು ಕುಮಠಳ್ಳಿ ಹೇಳಿದರು.</p>.<p>‘ಕೊರೊನಾ ಮೇಲೆರಗು ಎತ್ತಿದ್ದಂತೆ. ಎತ್ತಿನ ಮೈಸವರಿದರೆ ಸಮಾಧಾನಗೊಳ್ಳುತ್ತದೆ. ಅಂತೆಯೇ ಕೊರೊನಾ ಬಗ್ಗೆಯೂ ಎಚ್ಚರವಾಗಿರಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳಿಂದ ಈ ಸೋಂಕಿನಿಂದ ದೂರವಿರಬಹುದು. ಈ ರೋಗಕ್ಕೆ ಆದಷ್ಟು ಬೇಗನೆ ಔಷಧ ಸಿಗಲೆಂದು ಶಿವಯೋಗಿಗಳಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.</p>.<p>ಪಿಎಸ್ಐ ಕುಮಾರ ಹಾಡಕಾರ, ಅಥಣಿ ಕಾರ್ಮಿಕ ನಿರೀಕ್ಷಕ ಜಿ.ಬಿ. ಧೂಪದಾಳ, ಕೆಎಫ್ಸಿಯ ಎನ್.ಎನ್. ಗಾಣಿಗೇರ, ಶಶಿಕಾಂತ ಸಾಳವೆ, ವಿನಯ ಪಾಟೀಲ, ಅನಿಲ ಸೌದಾಗರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>