ಸೊಸೈಟಿಯಲ್ಲಿ ಕಳವಾಗಿದ್ದ ಬಗ್ಗೆ ಡಿ.31ರಂದು ನರೇಂಧ್ರ ಬಸವರಾಜ ಬೆಳಗಾವಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಮಾರ್ಕೆಟ್ ಉಪ ವಿಭಾಗದ ಎಸಿಪಿ ಸದಾಶಿವ ಕಟ್ಟೀಮನಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಸುನೀಲ ಪಾಟೀಲ, ಪಿಐ ಮಹಾದೇವ ಕುಂಬಾರ, ಪಿಎಸ್ಐ ಹೊನ್ನಪ್ಪ ತಳವಾರ, ಎಎಸ್ಐ ಎ.ಆರ್. ದುಂಡಗಿ, ಎಂ.ಜೆ. ಕುರೇರ, ಕೆ.ಬಿ. ಗೌರಾಣಿ, ಜೆ.ಎನ್. ಭೋಸಲೆ, ಎಂ.ಎನ್. ಮುಶಾಪುರೆ, ಎಸ್.ಎಂ. ಗುಡದೈಗೋಳ, ಮಂಜುನಾಥ ಮೇಲಸರ್ಜಿ, ಎಂ.ಬಿ. ಅಡವಿ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ನಗರ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.