<p><strong>ಘಟಪ್ರಭಾ (ಬೆಳಗಾವಿ ಜಿಲ್ಲೆ): </strong>ಕೋವಿಡ್–19 ಹರಡುವಿಕೆ ನಿರ್ವಹಣೆಗಾಗಿ ಕೈಗೊಂಡ ಲಾಕ್ಡೌನ್ ಸಡಿಲಿಕೆ ನೀಡಲಾಗಿದೆ. ಇಲ್ಲಿಯ ಪ್ರಸಿದ್ಧ ತರಕಾರಿ ಮಾರುಕಟ್ಟೆ ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದು, ಇದನ್ನೇ ನಂಬಿದ ಕೂಲಿ ಕಾರ್ಮಿಕರು ಮತ್ತು ರೈತರು ಹಾಗೂ ವರ್ತಕರು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಸಮೀಪದ ಮಲ್ಲಾಪೂರ ಪಿ.ಜಿ.ಯಲ್ಲಿರುವ ತರಕಾರಿ ಮಾರುಕಟ್ಟೆಯಿಂದ ರಾಜ್ಯದ ಹಲವೆಡೆಗೆ ತರಕಾರಿ ರವಾನೆಯಾಗುತ್ತದೆ. ನೆರೆಯ ಮಹಾರಾಷ್ಟ್ರದ ಮುಂಬೈ, ಗೋವಾ ಕೂಡ ಇಲ್ಲಿನ ತರಕಾರಿಯನ್ನೇ ನಂಬಿವೆ. ಘಟಪ್ರಭೆಯ ಒಡಲಲ್ಲಿ ನೂರಾರು ಚಿಕ್ಕ ಪುಟ್ಟ ಹೊಲಗಳಲ್ಲಿ ಬೆಳೆದ ರೈತರು ವಿವಿಧ ತರಕಾರಿಗಳನ್ನು ಬೆಳೆದು ಈ ಮಾರುಕಟ್ಟೆಗೆ ತರುವುದು ಸಾಮಾನ್ಯ. ತಾಜಾ ತರಕಾರಿಗೆ ಹೆಸರುವಾಸಿಯಾಗಿದೆ. ವರ್ಷವೀಡಿ ಈ ಮಾರುಕಟ್ಟೆ ಹಸಿರಿನಿಂದ ಕಂಗೊಳಿಸುತ್ತದೆ; ಅಷ್ಟೊಂದು ತರಕಾರಿ ಇಲ್ಲಿ ದೊರೆಯುತ್ತದೆ.</p>.<p>ಪ್ರತಿ ದಿನ ನೂರಾರು ವಾಹನಗಳು ತರಕಾರಿ ಹೊತ್ತೊಯ್ಯುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್ ಹರಡುವಿಕೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯ್ತಿಯು ತರಕಾರಿ ವ್ಯಾಪಾರಿಗಳಿಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಈ ಕಟ್ಟುನಿಟ್ಟಿನ ಕ್ರಮದಿಂದ ಹೆಚ್ಚಿನ ಜನಜಂಗುಳಿ ತಪ್ಪಿದೆ. ಅಂತರ ಕಾಯ್ದುಕೊಳ್ಳವುಂತೆಯೂ ಸೂಚಿಸಲಾಗಿದೆ.</p>.<p>ಕೋವಿಡ್ ಹರಡುವಿಕೆ ಭೀತಿಗೊಳಗಾಗಿದ್ದ ರೈತರು ಬೆಳೆದ ತರಕಾರಿ ಮಾರಾಟವಾಗದೆ ಕೊಳೆತು ಅಪಾರ ಹಾನಿ ಅನುಭವಿಸಿದ್ದರು. ದಲಾಲರು, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡಿದ್ದರು. ಜನರು ತರಕಾರಿಗೆ ಅಧಿಕ ಹಣ ಕೊಟ್ಟು ಪಡೆಯಬೇಕಾಯಿತು. ತರಕಾರಿಗಾಗಿ ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು.</p>.<p>‘ಪ್ರವಾಹ, ಅತಿವೃಷ್ಟಿ, ಕೋವಿಡ್ ಲಾಕ್ಡೌನ್, ಬೆಲೆ ಏರಿಕೆ ಹೀಗೆ... ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರ ಸಹಾಯಕ್ಕೆ ಬರಬೇಕು. ತರಕಾರಿ ಮಾರುಕಟ್ಟೆಗೆ ಅಗತ್ಯ ಸೌಲಭ್ಯಗಳನ್ನಾದರೂ ಒದಗಿಸಬೇಕು’ ಎಂದು ಗುಡಸ್ ಗ್ರಾಮದ ರೈತ ಅರುಣ ದೇಸಾಯಿ ಕೋರಿದರು.</p>.<p>‘ತರಕಾರಿ ಮಾರುಕಟ್ಟೆ ಸುಧಾರಣೆ ವಿಷಯದಲ್ಲಿ ಕೇವಲ ಆಶ್ವಾಸನೆಯಷ್ಟೆ ಸಿಕ್ಕಿದೆ. ಸಂಬಂಧಿಸಿದವರು ಕ್ರಮ ವಹಿಸಿಲ್ಲ’ ಎಂದು ಸಂಜಯ ಗುಂಡವಗೋಳ ಆರೋಪಿಸಿದರು.</p>.<p>‘ಪ್ರಸ್ತುತ ಕೋವಿಡ್ ಲಸಿಕಾ ಅಭಿಯಾನ ನಡೆದಿದೆ. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿ ಹಿರೇಮಠ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಘಟಪ್ರಭಾ (ಬೆಳಗಾವಿ ಜಿಲ್ಲೆ): </strong>ಕೋವಿಡ್–19 ಹರಡುವಿಕೆ ನಿರ್ವಹಣೆಗಾಗಿ ಕೈಗೊಂಡ ಲಾಕ್ಡೌನ್ ಸಡಿಲಿಕೆ ನೀಡಲಾಗಿದೆ. ಇಲ್ಲಿಯ ಪ್ರಸಿದ್ಧ ತರಕಾರಿ ಮಾರುಕಟ್ಟೆ ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದು, ಇದನ್ನೇ ನಂಬಿದ ಕೂಲಿ ಕಾರ್ಮಿಕರು ಮತ್ತು ರೈತರು ಹಾಗೂ ವರ್ತಕರು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಸಮೀಪದ ಮಲ್ಲಾಪೂರ ಪಿ.ಜಿ.ಯಲ್ಲಿರುವ ತರಕಾರಿ ಮಾರುಕಟ್ಟೆಯಿಂದ ರಾಜ್ಯದ ಹಲವೆಡೆಗೆ ತರಕಾರಿ ರವಾನೆಯಾಗುತ್ತದೆ. ನೆರೆಯ ಮಹಾರಾಷ್ಟ್ರದ ಮುಂಬೈ, ಗೋವಾ ಕೂಡ ಇಲ್ಲಿನ ತರಕಾರಿಯನ್ನೇ ನಂಬಿವೆ. ಘಟಪ್ರಭೆಯ ಒಡಲಲ್ಲಿ ನೂರಾರು ಚಿಕ್ಕ ಪುಟ್ಟ ಹೊಲಗಳಲ್ಲಿ ಬೆಳೆದ ರೈತರು ವಿವಿಧ ತರಕಾರಿಗಳನ್ನು ಬೆಳೆದು ಈ ಮಾರುಕಟ್ಟೆಗೆ ತರುವುದು ಸಾಮಾನ್ಯ. ತಾಜಾ ತರಕಾರಿಗೆ ಹೆಸರುವಾಸಿಯಾಗಿದೆ. ವರ್ಷವೀಡಿ ಈ ಮಾರುಕಟ್ಟೆ ಹಸಿರಿನಿಂದ ಕಂಗೊಳಿಸುತ್ತದೆ; ಅಷ್ಟೊಂದು ತರಕಾರಿ ಇಲ್ಲಿ ದೊರೆಯುತ್ತದೆ.</p>.<p>ಪ್ರತಿ ದಿನ ನೂರಾರು ವಾಹನಗಳು ತರಕಾರಿ ಹೊತ್ತೊಯ್ಯುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ ಕೋವಿಡ್ ಹರಡುವಿಕೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ, ಮಲ್ಲಾಪೂರ ಪಿ.ಜಿ. ಪಟ್ಟಣ ಪಂಚಾಯ್ತಿಯು ತರಕಾರಿ ವ್ಯಾಪಾರಿಗಳಿಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಈ ಕಟ್ಟುನಿಟ್ಟಿನ ಕ್ರಮದಿಂದ ಹೆಚ್ಚಿನ ಜನಜಂಗುಳಿ ತಪ್ಪಿದೆ. ಅಂತರ ಕಾಯ್ದುಕೊಳ್ಳವುಂತೆಯೂ ಸೂಚಿಸಲಾಗಿದೆ.</p>.<p>ಕೋವಿಡ್ ಹರಡುವಿಕೆ ಭೀತಿಗೊಳಗಾಗಿದ್ದ ರೈತರು ಬೆಳೆದ ತರಕಾರಿ ಮಾರಾಟವಾಗದೆ ಕೊಳೆತು ಅಪಾರ ಹಾನಿ ಅನುಭವಿಸಿದ್ದರು. ದಲಾಲರು, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಪರದಾಡಿದ್ದರು. ಜನರು ತರಕಾರಿಗೆ ಅಧಿಕ ಹಣ ಕೊಟ್ಟು ಪಡೆಯಬೇಕಾಯಿತು. ತರಕಾರಿಗಾಗಿ ಪರದಾಡುವ ಸ್ಥಿತಿಯೂ ನಿರ್ಮಾಣವಾಗಿತ್ತು.</p>.<p>‘ಪ್ರವಾಹ, ಅತಿವೃಷ್ಟಿ, ಕೋವಿಡ್ ಲಾಕ್ಡೌನ್, ಬೆಲೆ ಏರಿಕೆ ಹೀಗೆ... ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿರುವ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಅವರ ಸಹಾಯಕ್ಕೆ ಬರಬೇಕು. ತರಕಾರಿ ಮಾರುಕಟ್ಟೆಗೆ ಅಗತ್ಯ ಸೌಲಭ್ಯಗಳನ್ನಾದರೂ ಒದಗಿಸಬೇಕು’ ಎಂದು ಗುಡಸ್ ಗ್ರಾಮದ ರೈತ ಅರುಣ ದೇಸಾಯಿ ಕೋರಿದರು.</p>.<p>‘ತರಕಾರಿ ಮಾರುಕಟ್ಟೆ ಸುಧಾರಣೆ ವಿಷಯದಲ್ಲಿ ಕೇವಲ ಆಶ್ವಾಸನೆಯಷ್ಟೆ ಸಿಕ್ಕಿದೆ. ಸಂಬಂಧಿಸಿದವರು ಕ್ರಮ ವಹಿಸಿಲ್ಲ’ ಎಂದು ಸಂಜಯ ಗುಂಡವಗೋಳ ಆರೋಪಿಸಿದರು.</p>.<p>‘ಪ್ರಸ್ತುತ ಕೋವಿಡ್ ಲಸಿಕಾ ಅಭಿಯಾನ ನಡೆದಿದೆ. ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿ ಹಿರೇಮಠ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>