‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಕೋರಿಕೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ. 2010ರಿಂದ 2019ರವರೆಗೆ ವಿವಿಧ ಪದವಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗಿ, ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲದ ಮತ್ತು ಪದವಿ ಪೂರ್ಣಗೊಳಿಸದ ಸ್ನಾತಕ (ಬಿಎ, ಬಿಎಸ್ಸಿ, ಬಿಎಸ್ಸಿ (ಸಿಎಸ್), ಬಿಕಾಂ, ಬಿಸಿಎ, ಬಿಬಿಎ, ಬಿಎಸ್ಡಬ್ಲ್ಯು, ಬಿಇಡಿ, ಬಿಪಿಇಡಿ) ಪದವಿಯ ಹಾಗೂ ಸ್ನಾತಕೋತ್ತರ (ಎಂಎ, ಎಂಎಸ್ಸಿ, ಎಂಕಾಂ, ಎಂಎಸ್ಡಬ್ಲ್ಯು, ಎಂಬಿಎ, ಎಂಸಿಎ, ಎಂಎಲ್ಐಸಿ) ಪದವಿ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶವನ್ನು ಒಂದು ಬಾರಿ ಮಾತ್ರ ಕಲ್ಪಿಸಲಿದೆ. ಪರೀಕ್ಷೆಗಳನ್ನು ಮೇ/ಜೂನ್ನಲ್ಲಿ ನಡೆಸಲಾಗುವುದು’ ಎಂದು ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ ತಿಳಿಸಿದ್ದಾರೆ.