<p><strong>ಕೌಜಲಗಿ</strong>: ಮನುಕುಲದ ಉದ್ದಾರಕ್ಕಾಗಿ ಜನಿಸಿ ಬಂದ ಯೇಸು ಕ್ರಿಸ್ತ ಜಗತ್ತಿನ ಕಷ್ಟಗಳೆಲ್ಲವನ್ನು ತನ್ನ ಒಡಲೊಳಗೆ ಇರಿಸಿಕೊಂಡು ಪ್ರೀತಿ-ತ್ಯಾಗದ ಬೆಳಕಾದರೂ ಎಂದು ಕೌಜಲಗಿ ಮೆಥೋಡಿಸ್ಟ ಚರ್ಚನ ಸಭಾ ಪಾಲಕ ಅನಿಲ ಪೂಜನ್ನವರ ಹೇಳಿದರು.</p>.<p>ಕೌಜಲಗಿ ಪಟ್ಟಣದಲ್ಲಿಯ ಮೆಥೋಡಿಸ್ಟ್ ಚರ್ಚ್ ನಲ್ಲಿ ಜರುಗಿದ ಶುಭ ಶುಕ್ರವಾರ ಯೇಸು ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಾರ್ಥನೆ ಅನಂತರ ಕ್ರೈಸ್ತ ದೇವರ ಮಕ್ಕಳನ್ನು ಉದ್ದೇಶಿಸಿ ಸಭಾ ಪಾಲಕರು ಮಾತನಾಡಿದರು.</p>.<p>ಶುಭ ಶುಕ್ರವಾರ ಕ್ರೈಸ್ತ ದೇವನ ಮಕ್ಕಳಿಗೆ ಅತ್ಯಂತ ಪವಿತ್ರವಾದ ದಿನ. ಯೇಸುವಿನ ಸ್ಮರಣಾಚರಣೆ ಅಷ್ಟೇ ಮುಖ್ಯವಲ್ಲ. ಆತ ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳು, ಹಿಂಸೆ-ನೋವುಗಳನ್ನು ಕಳೆದು, ಮನುಕುಲದ ಬದುಕಿಗೆ ಹೊಸ ಬೆಳಕನ್ನು ಮೂಡಿಸಿದ ಶುಭ ಶುಕ್ರವಾರವಾಗಿದೆ ಎಂದರು. </p>.<p>ಚರ್ಚನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಮುದಾಯದ ಮಹಿಳೆಯರು ಯೇಸುವಿನ ಭಕ್ತಿ ಗೀತೆಗಳನ್ನು ಹಾಡಿ ಸ್ಮರಿಸಿದರು.</p>.<p>ಪ್ರಮುಖರಾದ ಪ್ರಶಾಂತ್, ಈಶ್ವರ, ಶ್ಯಾಮರಾಜ, ಹಾಜು, ಸುಮಿತ್ರಾ, ವಿದ್ಯಾಶ್ರೀ, ಜೇಮ್ಸ್ ಉದ್ದಪ್ಪನವರ, ಅಶೋಕ ಉದ್ದಪ್ಪ ನವರ, ಪಕೀರಪ್ಪ ಪೂಜನ್ನವರ, ಶಾಂತಪ್ಪ ಹಿರೇ ಮೇತ್ರಿ, ರಾಮಣ್ಣ ಈಟಿ ಮುಂತಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೌಜಲಗಿ</strong>: ಮನುಕುಲದ ಉದ್ದಾರಕ್ಕಾಗಿ ಜನಿಸಿ ಬಂದ ಯೇಸು ಕ್ರಿಸ್ತ ಜಗತ್ತಿನ ಕಷ್ಟಗಳೆಲ್ಲವನ್ನು ತನ್ನ ಒಡಲೊಳಗೆ ಇರಿಸಿಕೊಂಡು ಪ್ರೀತಿ-ತ್ಯಾಗದ ಬೆಳಕಾದರೂ ಎಂದು ಕೌಜಲಗಿ ಮೆಥೋಡಿಸ್ಟ ಚರ್ಚನ ಸಭಾ ಪಾಲಕ ಅನಿಲ ಪೂಜನ್ನವರ ಹೇಳಿದರು.</p>.<p>ಕೌಜಲಗಿ ಪಟ್ಟಣದಲ್ಲಿಯ ಮೆಥೋಡಿಸ್ಟ್ ಚರ್ಚ್ ನಲ್ಲಿ ಜರುಗಿದ ಶುಭ ಶುಕ್ರವಾರ ಯೇಸು ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಾರ್ಥನೆ ಅನಂತರ ಕ್ರೈಸ್ತ ದೇವರ ಮಕ್ಕಳನ್ನು ಉದ್ದೇಶಿಸಿ ಸಭಾ ಪಾಲಕರು ಮಾತನಾಡಿದರು.</p>.<p>ಶುಭ ಶುಕ್ರವಾರ ಕ್ರೈಸ್ತ ದೇವನ ಮಕ್ಕಳಿಗೆ ಅತ್ಯಂತ ಪವಿತ್ರವಾದ ದಿನ. ಯೇಸುವಿನ ಸ್ಮರಣಾಚರಣೆ ಅಷ್ಟೇ ಮುಖ್ಯವಲ್ಲ. ಆತ ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳು, ಹಿಂಸೆ-ನೋವುಗಳನ್ನು ಕಳೆದು, ಮನುಕುಲದ ಬದುಕಿಗೆ ಹೊಸ ಬೆಳಕನ್ನು ಮೂಡಿಸಿದ ಶುಭ ಶುಕ್ರವಾರವಾಗಿದೆ ಎಂದರು. </p>.<p>ಚರ್ಚನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಸಮುದಾಯದ ಮಹಿಳೆಯರು ಯೇಸುವಿನ ಭಕ್ತಿ ಗೀತೆಗಳನ್ನು ಹಾಡಿ ಸ್ಮರಿಸಿದರು.</p>.<p>ಪ್ರಮುಖರಾದ ಪ್ರಶಾಂತ್, ಈಶ್ವರ, ಶ್ಯಾಮರಾಜ, ಹಾಜು, ಸುಮಿತ್ರಾ, ವಿದ್ಯಾಶ್ರೀ, ಜೇಮ್ಸ್ ಉದ್ದಪ್ಪನವರ, ಅಶೋಕ ಉದ್ದಪ್ಪ ನವರ, ಪಕೀರಪ್ಪ ಪೂಜನ್ನವರ, ಶಾಂತಪ್ಪ ಹಿರೇ ಮೇತ್ರಿ, ರಾಮಣ್ಣ ಈಟಿ ಮುಂತಾದವರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>