ಬೆಳಗಾವಿ: ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಎರಡು ನವಜಾತ ಶಿಶುಗಳಿಗೆ ಇಲ್ಲಿನ ಅರಿಹಂತ ಆಸ್ಪತ್ರೆ ವೈದ್ಯರು ನ.9ರಂದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಚೇತರಿಸಿಕೊಂಡಿರುವ ಶಿಶುಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಇರಾಕ್ನಿಂದ ಬಂದಿದ್ದ 30 ದಿನಗಳ ಶಿಶು ಮತ್ತು ಗೋವಾದಿಂದ ಬಂದಿದ್ದ 10 ದಿನಗಳ ಶಿಶುವಿಗೆ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಡಿ.ದೀಕ್ಷಿತ್ ನೇತೃತ್ವದಲ್ಲಿ ಡಾ.ಅಭಿಷೇಕ ಜೋಶಿ, ಡಾ.ಅಮೃತ ನೇರ್ಲಿಕರ್, ಡಾ.ಎಂ.ಬಿ.ಪ್ರಶಾಂತ, ಡಾ.ಅವಿನಾಶ ಲೋಂಡೆ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
ವೈದ್ಯರ ಕಾರ್ಯಕ್ಕೆ ಆಸ್ಪತ್ರೆ ಅಧ್ಯಕ್ಷ ರಾವಸಾಹೇಬ್ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಉತ್ತಮ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.