ಕೃಷ್ಣಾ ನದಿಗೆ ಅಡ್ಡಲಾಗಿರುವ ತಾಲ್ಲೂಕಿನ ಕಲ್ಲೋಳ- ಯಡೂರ, ಮಾಂಜರಿ-ಬಾವಾನ ಸೌಂದತ್ತಿ, ದೂಧ್ಗಂಗಾ ನದಿಗೆ ಅಡ್ಡಲಾಗಿರುವ ಮಲಿಕವಾಡ- ದತ್ತವಾಡ ಹಾಗೂ ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧ್ಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ- ಭೋಜ್, ವೇದಗಂಗಾ ನದಿಗೆ ಅಡ್ಡಲಾಗಿರುವ ಕೊಡ್ನಿ-ಬೂದಿಹಾಳ, ಮಾಂಗೂರ-ಕುನ್ನೂರ, ಬಾರವಾಡ-ಕುನ್ನೂರ, ಭೋಜ್ವಾಡಿ- ಶಿವಾಪುರವಾಡಿ, ಜತ್ರಾಟ- ಭೀವಶಿ ಬ್ರಿಡ್ಜ್ ಕಂ ಬ್ಯಾರೇಜ್ ಜಲಾವೃತ ಸ್ಥಿತಿಯಲ್ಲಿಯೇ ಇವೆ. ಗುರುವಾರ ಅಕ್ಕೋಳ- ಸಿದ್ನಾಳ ಕಿರು ಸೇತುವೆಯೂ ಜಲಾವೃತಗೊಂಡಿದೆ. ವಾಹನ ಮತ್ತು ಜನಸಂಚಾರಕ್ಕೆ ಪರ್ಯಾಯ ಮಾರ್ಗಗಳಿವೆ.