‘ಯಾವುದೋ ಕೆಟ್ಟ ಘಳಿಗೆಯಿಂದ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದೆ. ನಮ್ಮ ಕುಟುಂಬ ಯಾವುದೋ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಗಂಗಾ ಕುಲಕರ್ಣಿ ಹಾಗೂ ಶಿವಾನಂದ ವಾಲಿ ನಮ್ಮನ್ನು ವಶೀಕರಣ ಮಾಡಿಕೊಂಡಿದ್ದರು. ನನ್ನ, ತಂದೆ ಹಾಗೂ ತಾಯಿಯ ಆಸ್ತಿ ಬರೆಸಿಕೊಂಡಿದ್ದರು. ಪ್ರಾಣ ಉಳಿಸಿಕೊಳ್ಳಲು ಪೂಜೆ ಮಾಡಿಸಬೇಕು ಎಂದು ಅವರಿಬ್ಬರೂ ಹೇಳಿದ್ದರು. ಅವರಿಗೆ ಪೂಜೆಗೆಂದು ಹಣ ಕೊಡುತ್ತಿದ್ದೆವು. ಆದರೆ, ನಾವು ಪಾಲ್ಗೊಳ್ಳುತ್ತಿರಲಿಲ್ಲ. ಅದೆಂತಹ ಪೂಜೆ ಮಾಡುತ್ತಿದ್ದರೋ ಗೊತ್ತಿಲ್ಲ. ಈಗ ಅದೆಲ್ಲದರಿಂದ ಸಂಪೂರ್ಣವಾಗಿ ಹೊರಬಂದಿದ್ದೇವೆ’ ಎಂದರು.