‘ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಳೆದ ಡಿಸೆಂಬರ್ನಲ್ಲಿ ಉಪ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ಸ್ಪೀಕರ್ ಅವರ ತೀರ್ಪಿನ ಬಗ್ಗೆ ಕೊನೆ ಗಳಿಗೆಯಲ್ಲಿ ಆದೇಶವಾಯಿತು. ಈ ಕಾರಣದಿಂದಾಗಿ ನಾವು ಮೇಲ್ಮನವಿ ಸಲ್ಲಿಸಲಿಲ್ಲ. ಶೀಘ್ರವೆ ಮಿತ್ರರೆಲ್ಲರೂ ಸಭೆ ನಡೆಸಿ ಚರ್ಚಿಸುತ್ತೇವೆ. ನಮ್ಮಲ್ಲಿ ಒಬ್ಬರಿಗೆ ಅನ್ಯಾಯ ಆಗಿರುವುದರಿಂದ ಎಲ್ಲರೂ ಸೇರುತ್ತೇವೆ’ ಎಂದು ಹೇಳಿದರು.