<p><strong>ಬೆಳಗಾವಿ: </strong>ಸೊಸೈಟಿ ಹಣ ದುರುಪಯೋಗ ಹಾಗೂ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದ ಹಿಂದಿನ ಕಾರ್ಯದರ್ಶಿ ಶುಕ್ರವಾರ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾರೆ.</p>.<p>ಖಾನಾಪುರ ತಾಲ್ಲೂಕು ಗಂದಿಗವಾಡದ ಮಹಾಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಹಿಂದಿನ ಕಾರ್ಯದರ್ಶಿ ಶೀತಲ ಬಡಸದ ಶಿಕ್ಷೆಗೆ ಗುರಿಯಾದವರು.</p>.<p>‘ಸೊಸೈಟಿಗೆ ಸೇರಿದ ₹ 5.39 ಲಕ್ಷ. ದುರುಪಯೋಗ ಪಡಿಸಿಕೊಂಡಿದ್ದರು. ಅಲ್ಲದೆ, ಸಾಲದ ರೂಪದಲ್ಲಿ ಪಡೆದ ₹ 1.90 ಲಕ್ಷ ಹಣ ಮರಳಿಸಿರಲಿಲ್ಲ. ಅವರು ನೀಡಿದ್ದ ಚೆಕ್ಗಳು ಅಮಾನ್ಯವಾಗಿದ್ದವು. ಹಾಗಾಗಿ ಸೊಸೈಟಿ ಆಡಳಿತ ಮಂಡಳಿ ಬೆಳಗಾವಿಯ 8ನೇ ಜೆಎಂಎಫ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಶೆಮೀದಾ 2021ರ ಜು.16ರಂದು ನೀಡಿದ ತೀರ್ಪಿನಲ್ಲಿ ಆರೋಪಿಯು ₹ 4.75 ಲಕ್ಷ ಮತ್ತು ₹ 3.20 ಲಕ್ಷ ದಂಡವಾಗಿ ತುಂಬಬೇಕು. ತಪ್ಪಿದಲ್ಲಿ ಎರಡೂ ಪ್ರಕರಣಗಳಲ್ಲಿ ತಲಾ 5 ತಿಂಗಳು ಜೈಲು ಶಿಕ್ಷೆಯ ಆದೇಶವನ್ನು ನ್ಯಾಯಾಲಯ ವಿಧಿಸಿತ್ತು.</p>.<p>‘ಆದರೆ, ಶೀತಲ ದಂಡ ಪಾವತಿಸದ್ದರಿಂದ ತಿಲಕವಾಡಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರಿಂದ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಎರಡು ಪ್ರಕರಣದಲ್ಲಿ ತಲಾ 5 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ’ ಎಂದು ಸೊಸೈಟಿ ಪರವಾಗಿ ವಾದ ಮಂಡಿಸಿದ ಸುನೀಲ ಸಾಣಿಕೊಪ್ಪ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಸೊಸೈಟಿ ಹಣ ದುರುಪಯೋಗ ಹಾಗೂ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದ ಹಿಂದಿನ ಕಾರ್ಯದರ್ಶಿ ಶುಕ್ರವಾರ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾರೆ.</p>.<p>ಖಾನಾಪುರ ತಾಲ್ಲೂಕು ಗಂದಿಗವಾಡದ ಮಹಾಲಕ್ಷ್ಮಿ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಹಿಂದಿನ ಕಾರ್ಯದರ್ಶಿ ಶೀತಲ ಬಡಸದ ಶಿಕ್ಷೆಗೆ ಗುರಿಯಾದವರು.</p>.<p>‘ಸೊಸೈಟಿಗೆ ಸೇರಿದ ₹ 5.39 ಲಕ್ಷ. ದುರುಪಯೋಗ ಪಡಿಸಿಕೊಂಡಿದ್ದರು. ಅಲ್ಲದೆ, ಸಾಲದ ರೂಪದಲ್ಲಿ ಪಡೆದ ₹ 1.90 ಲಕ್ಷ ಹಣ ಮರಳಿಸಿರಲಿಲ್ಲ. ಅವರು ನೀಡಿದ್ದ ಚೆಕ್ಗಳು ಅಮಾನ್ಯವಾಗಿದ್ದವು. ಹಾಗಾಗಿ ಸೊಸೈಟಿ ಆಡಳಿತ ಮಂಡಳಿ ಬೆಳಗಾವಿಯ 8ನೇ ಜೆಎಂಎಫ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಶೆಮೀದಾ 2021ರ ಜು.16ರಂದು ನೀಡಿದ ತೀರ್ಪಿನಲ್ಲಿ ಆರೋಪಿಯು ₹ 4.75 ಲಕ್ಷ ಮತ್ತು ₹ 3.20 ಲಕ್ಷ ದಂಡವಾಗಿ ತುಂಬಬೇಕು. ತಪ್ಪಿದಲ್ಲಿ ಎರಡೂ ಪ್ರಕರಣಗಳಲ್ಲಿ ತಲಾ 5 ತಿಂಗಳು ಜೈಲು ಶಿಕ್ಷೆಯ ಆದೇಶವನ್ನು ನ್ಯಾಯಾಲಯ ವಿಧಿಸಿತ್ತು.</p>.<p>‘ಆದರೆ, ಶೀತಲ ದಂಡ ಪಾವತಿಸದ್ದರಿಂದ ತಿಲಕವಾಡಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದರಿಂದ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಎರಡು ಪ್ರಕರಣದಲ್ಲಿ ತಲಾ 5 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ’ ಎಂದು ಸೊಸೈಟಿ ಪರವಾಗಿ ವಾದ ಮಂಡಿಸಿದ ಸುನೀಲ ಸಾಣಿಕೊಪ್ಪ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>