ಬಸವ ಸಮಿತಿ ಕಾರ್ಯಾಲಯದ ಮುಂದೆ ಅಪ್ಪು ಮಾಳಿ, ಬಸವೇಶ್ವರ ಸಹಕಾರಿ ಸಂಘದ ಮುಂದೆ ನಿರ್ದೇಶಕ ಲಕ್ಷ್ಮಣ ಕಾಗವಾಡ, ಮುರಘೇಂದ್ರ ಬ್ಯಾಂಕ್ ಎದುರು ನಿಂಗನಗೌಡ ಪಾಟೀಲ, ಪಶು ಆಸ್ಪತ್ರೆ ಎದುರು ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಮಿರ್ಜಿ, ಪಿ.ಕೆ.ಪಿ.ಎಸ್. ಆವರಣದಲ್ಲಿ ನಿರ್ದೇಶಕ ಶಿವನಿಂಗ ಅರಟಾಳ, ಬಿ.ಸಿ.ಎಂ. ಹಾಸ್ಟೆಲ್ ಎದುರು ಮೇಲ್ವಿಚಾರಕ ಕೇದಾರಿ ಬಾನಿ, ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಅಪ್ಪಸಾಬ ಮಾಕಾಣಿ, ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಅಧ್ಯಕ್ಷ ಶಹಜಹಾನ ಡೊಂಗರಗಾಂವ, ಪೊಲೀಸ್ ಠಾಣೆ ಮುಂದೆ ಎಸ್ಐ ಶಿವರಾಜ ನಾಯಕವಾಡ, ಹೆಸ್ಕಾಂ ಕಾರ್ಯಾಲಯದ ಮುಂದೆ ಹಿರಿಯ ಅಧಿಕಾರಿ ರಾಮಣ್ಣ ಕಲಾರೆ, ಆದರ್ಶ ಶಿಕ್ಷಣ ಸಂಸ್ಥೆಯ ಎದುರು ನಿವೃತ್ತ ಪ್ರಾಚಾರ್ಯ ಎ.ಎಸ್. ನಾಯಿಕ, ಕನ್ನಡ ಸರ್ಕಾರಿ ಶಾಲೆ ಆವರಣದಲ್ಲಿ ಸಿ.ಆರ್.ಸಿ. ಮಹಾಂತೇಶ ಗುಡದಿನ್ನಿ, ಮಲ್ಲಿಕಾರ್ಜುನ ಸಹಕಾರಿ ಸಂಘದ ಮುಂದೆ ಶಿವಪ್ರಸಾದ ತೆಲಸಂಗ ಧ್ವಜಾರೋಹಣ ನೆರವೇರಿಸಿದರು.