‘ಸುಪ್ರೀಂ ಕೋರ್ಟ್ ಕೂಡ ನಮ್ಮಂಥ ನೌಕರರ ಪರವಾಗಿಯೇ ಇದೆ. ಆದರೆ, ಈ ತೀರ್ಪಿಗೆ ವಿರುದ್ಧವಾಗಿ ಸರ್ಕಾರವು ನಡೆದುಕೊಳ್ಳುತ್ತಿದೆ. ಜೀತಪದ್ಧತಿ ಪ್ರೋತ್ಸಾಹಿಸುವ ದಮನಕಾರಿ ಧೋರಣೆಯನ್ನು ತಾಳುವುದು ಸರಿಯಲ್ಲ. ಹೀಗಾಗಿ ಸರ್ಕಾರವು ವಜಾ ಆದೇಶ ರದ್ದುಗೊಳಿಸಬೇಕು. ನಮ್ಮನ್ನು ಕಾಯಂಗೊಳಿಸಬೇಕು. ಇತರ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.