‘ಬಾಲಾಚಾರ್ಯ ಸಿದ್ಧಸೇನ ಮಹಾರಾಜರು ದೀಕ್ಷೆ ಸ್ವೀಕರಿಸಿ, 25 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಅವಧಿಯಲ್ಲಿ ಅನೇಕ ಯಾತ್ರಾ ಸ್ಥಳ ಜೀರ್ಣೋದ್ಧಾರಗೊಳಿಸಿದ್ದಾರೆ. ಅನೇಕ ದೇವಾಲಯ ನಿರ್ಮಿಸಿದ್ದಾರೆ. 2016-17ರಲ್ಲಿ ಆಧ್ಯಾತ್ಮಿಕ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್ ದೇವಾಲಯ, ಗುರುಕುಲ, ವೃದ್ಧಾಶ್ರಮ, ಗೋಶಾಲೆ, ಉಚಿತ ಆಸ್ಪತ್ರೆ ನಿರ್ಮಾಣದಂತಹ ಜನಕಲ್ಯಾಣ ಕೆಲಸಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ’ ಎಂದು ತಿಳಿಸಿದರು.