ಮುಖ್ಯಮಂತ್ರಿಯು ಹುಕ್ಕೇರಿ ತಾಲ್ಲೂಕಿನಲ್ಲಿ ಶನಿವಾರ ಸಂಜೆಯಿಂದ ಪ್ರವಾಸ ಕೈಗೊಂಡು ನಗರದಲ್ಲಿ ತಂಗಿದ್ದರು. ಭಾನುವಾರವೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಆದರೆ, ಈ ವೇಳೆ ಜಾರಕಿಹೊಳಿ ಸಹೋದರರು ದೂರ ಉಳಿದರು. ಹಿಂದಿನ ಭೇಟಿಯ ವೇಳೆಯಲ್ಲೂ ಅವರು ಬೊಮ್ಮಾಯಿ ಭೇಟಿ ಆಗಿರಲಿಲ್ಲ. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಕೂಡ ಕಾಣಿಸಿಕೊಳ್ಳಲಿಲ್ಲ.