ಈ ವೇಳೆ ಜಯ ಕರ್ನಾಟಕ ಸಂಘಟನೆಯ ಆಕಾಶ ನಂದಗಾಂವ, ಶಿಕ್ಷಕ ಅಶೋಕ ಡಾಬೋಳಿ, ಚೇತನಕುಮಾರ ಮಾದರ, ಸುನೀಲ ಮಂಗಸೂಳಿ, ಶ್ರೀಕಾಂತ ಸೂರ್ಯವಂಶಿ, ಪತ್ರಕರ್ತರಾದ ಲಕ್ಷ್ಮಣ ಕೋಳಿ, ಸಿದ್ದಾರೂಢ ಬಣ್ಣದ, ಅಬ್ಬಾಸಲಿ ಮುಲ್ಲಾ, ಸುನೀಲ ಮಂಗಸೂಳಿ, ಬಸವರಾಜ ನಂದಗಾಂವ, ಚೇತನ ಸನದಿ, ಗಂಗಾಧರ ತುರಾಯಿ ಇದ್ದರು, ಸುಮಾರು 59 ಜನ ಕವಿಗಳು ಭಾಗವಹಿಸಿದ್ದರು. ಇದರಲ್ಲಿ ಲಕ್ಷ್ಮಣ ಗುರವ ಪ್ರಥಮ, ರೋಹಿಣಿ ಮಡಿವಾಳ ದ್ವಿತೀಯ, ಸಂಗಮೇಶ ಗುರವ ತೃತೀಯ, ದ್ರಾಕ್ಷಾಯಿಣಿ ಮೆಂಡಿಗೇರಿ ಚತುರ್ಥ, ಸರ್ವೇಶ ಗುರವ ಪಂಚಮ, ಸಂಗಮೇಶ ಮಡಿವಾಳ ಹಾಗೂ ಭಾರತಿ ಬಡಿಗೇರ ಸಮಾಧಾನಕರ ಬಹುಮಾನ ಪಡೆದರು.