ಬೆಳಗಾವಿ: ನಗರದ ರಾಮಲಿಂಗಖಿಂಡ್ ಗಲ್ಲಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)ಮುಖಂಡರು ಹಾಗೂ ಶಿವಸೇನಾ ಮುಖಂಡರ ನಡುವೆ ಶುಕ್ರವಾರವಾಗ್ವಾದ ನಡೆದಿದೆ. ಈ ವೇಳೆಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಅವರ ಕಾರಿನ ಮುಂಭಾಗದಲ್ಲಿದ್ದ ಮರಾಠಿ ಬೋರ್ಡ್ ಹಾಗೂ ನಂಬರ್ ಪ್ಲೇಟ್ ಅನ್ನು ಕರವೇ ಕಾರ್ಯಕರ್ತರು ಕಿತ್ತು ಹಾಕಿದ್ದಾರೆ.