‘ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ. ನಾಡಿನಲ್ಲಿರುವ ಎಲ್ಲರೂ ರೈತರೆ. ರೈತನೆ ರಾಷ್ಟ್ರ ನಾಯಕ. ಈಗ ಸೃಷ್ಟಿಯಾಗಿರುವ ಕಾನೂನಿನ ಗೊಂದಲವು ರೈತರಿಗೆ ನಾಯಕತ್ವ ಸಿಗದೆ ಇರುವುದರಿಂದಾಗಿ ಆಗಿದೆ. ನಗರವೂ ಸೇರಿದಂತೆ ಎಲ್ಲ ಕಡೆಯೂ ಜನರನ್ನು ಮನೆ ಮನೆಗೆ ಹೋಗಿ ಮುಟ್ಟುವ ಯೋಜನೆ ಹಮ್ಮಿಕೊಂಡಿದ್ದೇವೆ. ‘ರೈತ ದಾನ’ ಅಥವಾ ‘ರೈತ ಭಿಕ್ಷೆ’ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ, ಒಂದು ಬುಟ್ಟಿ ಅಕ್ಕಿ, ರೊಟ್ಟಿ ಹಾಗೂ ನೋಟನ್ನು ಕೇಳುತ್ತೇವೆ. ಸಂಗ್ರಹವಾಗುವ ಹಣದಿಂದಲೇ ಸಂಘಟನೆ ಬೆಳೆಸುತ್ತೇವೆ’ ಎಂದು ಮಾಹಿತಿ ನೀಡಿದರು.