ಸುಕನ್ಯಾ ಎನ್ನುವವರು ಮಾತನಾಡಿ, ‘ನಮಗೆ ಮಾಧ್ಯಮದವರು ಸೇರಿ ಯಾರಿಂದಲೂ ಸಹಾಯ, ಸಹಕಾರ ಸಿಗುತ್ತಿಲ್ಲ. ನಮ್ಮ ಮುಂದಿನ ಭವಿಷ್ಯವೇನು ಎನ್ನುವುದೂ ಗೊತ್ತಾಗುತ್ತಿಲ್ಲ. ನ್ಯಾಯದ ದಾರಿಯಲ್ಲಿ ವೇತನ ಹೆಚ್ಚಳ ಕೇಳಿದರೆ ಸರ್ಕಾರ ಹಟಮಾರಿ ಧೋರಣೆ ತಳೆದಿದೆ. ಕಳೆದ ತಿಂಗಳು ಅರ್ಧ ಸಂಬಳ ಹಾಕಿದ್ದಾರೆ. ಇದರಿಂದ ಹಬ್ಬ ಆಚರಿಸುವುದಿರಲಿ, ಜೀವನ ಸಾಗಿಸುವುದೆ ಕಷ್ಟವಾಗುತ್ತಿದೆ. ಭಿಕ್ಷಾಟನೆಗೂ, ಪ್ರತಿಭಟನೆಗೂ ಅನುಮತಿ ಪಡೆಯಬೇಕು ಎನ್ನುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಸಿ ನಮ್ಮನ್ನು ಉಳಿಸಿರಿ’ ಎಂದು ಕೋರಿದರು.
ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರೊಬ್ಬರನ್ನು ಕುಟುಂಬದವರು ತಡೆದು ತರಾಟೆಗೆ ತೆಗೆದುಕೊಂಡರು. ಕಾರ್ಯ ನಿರ್ವಹಿಸಲು ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರಲ್ಲಿ ಕೆಲವರ ಮೇಲೆ ಪೊಲೀಸರು ಥಳಿಸಿದ ಘಟನೆಯೂ ನಡೆದಿದೆ.