‘ಇಲ್ಲಿ 29 ವರ್ಷಗಳಿಂದ ಹಲವು ಮನೆಗಳು ನಿರ್ಮಾಣಗೊಂಡಿದ್ದರೂ ಅಗತ್ಯವಾದ ರಸ್ತೆ, ಚರಂಡಿ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಬುಡಾದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಯಾವುದೇ ಅಭಿವೃದ್ಧಿಯನ್ನೂ ಮಾಡದೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಇದರಿಂದ ನಾವು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳಾದ ಎಂ.ಐ. ಬೋರಣ್ಣವರ, ವಿ.ಬಿ. ಸಣಪೂಜಿ, ಎ.ಎಸ್. ಬಾಗೇವಾಡಿ, ಆರೀಫ್ ಎಚ್. ಬಿರಾದಾರ, ರಾಜಲಕ್ಷ್ಮಿ ಸದಾಶಿವ ಕಿತ್ತೂರ, ಮೀನಾಕ್ಷಿ ತೊಗರಿ, ವಿರೂಪಾಕ್ಷಿ ಯರಗಂಬಳಿಮಠ, ಚಂದ್ರಕಾಂತ ಕುಲಕರ್ಣಿ, ಡಾ.ಮಹೇಶ ಗುರನಗೌಡರ, ಶಾಂತಕುಮಾರ ಅತೋಡೆ, ಪ್ರಭು ಚಂದ್ರರಗಿರಿಮಠ ಮೊದಲಾದವರು ದೂರಿದ್ದಾರೆ.