<p><strong>ಮೂಡಲಗಿ:</strong> ತಾಲ್ಲೂಕಿನ ತುಕ್ಕಾನಟ್ಟಿಯ ಲಕ್ಷ್ಮೀದೇವಿ ಜಾತ್ರೆಯ ರಥೋತ್ಸವವು ಸೋಮವಾರ ಅಪಾರ ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಮತ್ತು ಉಡಿ ತುಂಬಿದರು. ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವವು ವಿವಿಧ ವಾದ್ಯಗಳೊಂದಿಗೆ ಪ್ರಾರಂಭವಾಯಿತು. ರಥದೊಂದಿಗೆ ಲಕ್ಷ್ಮೀದೇವಿ ಪಲ್ಲಕ್ಕಿಯೊಂದಿಗೆ ಕೆರೆಸಿದ್ದೇಶ್ವರ, ಹನಮಂತದೇವರು ಮತ್ತು ಅಮೋಘಸಿದ್ಧ ಪಾಲಕಿಗಳಿಗೆ ಭಕ್ತರು ಸೇವೆ ಮಾಡಿದರು.</p>.<p> ಭಕ್ತರು ‘ಜೈ ಲಕ್ಷ್ಮೀದೇವಿ’ ಎಂದು ಜೈಕಾರ ಹಾಕಿ ದೇವಿಗೆ ಭಂಡಾರ ಹಾರಿಸಿ ಆಡಿದ ಹೊನ್ನಾಟವು ಇಡೀ ಜಾತ್ರೆಗೆ ಕಳೆಕಟ್ಟಿತ್ತು. ಸೇರಿದ ಭಕ್ತರೆಲ್ಲ ಭಂಡಾರದಲ್ಲಿ ಮಿಂದೆದ್ದರು. ಭಂಡರಾದ ಓಕುಳಿಯಲ್ಲಿ ಇಡೀ ಗ್ರಾಮವು ಭಂಡಾರಮಯವಾಗಿತ್ತು. ದೇವಿಗೆ ಹೂವು, ಹಣ್ಣು, ಕಾಯಿ, ಬತ್ತಾಸು ಅರ್ಪಿಸಿದರು.</p>.<p>ಮಧ್ಯಾಹ್ನ ರಥವನ್ನು ಹುಣಸೆ ಬಣದ ಕೆರೆಸಿದ್ಧೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ದೇವಿಗೆ ಅಣ್ಣನಾಗಿರುವ ಕೆರೆಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ರಂಗೋಲಿ ಚಿತ್ತಾರದ ಅಲಂಕಾರದ ಮಧ್ಯದಲ್ಲಿ ದೇವಿಗೆ ಉಡಿ ತುಂಬಿದ ನಂತರ ದೇವಿ ರಥ ಮರಳಿ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು. </p>.<p>ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದ ಆರಂಭವಾದ ಅನ್ನಸಂತರ್ಪಣೆಯಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ತಾಲ್ಲೂಕಿನ ತುಕ್ಕಾನಟ್ಟಿಯ ಲಕ್ಷ್ಮೀದೇವಿ ಜಾತ್ರೆಯ ರಥೋತ್ಸವವು ಸೋಮವಾರ ಅಪಾರ ಭಕ್ತರ ಸಮೂಹದಲ್ಲಿ ವಿಜೃಂಭಣೆಯಿಂದ ಜರುಗಿತು.</p>.<p>ಬೆಳಿಗ್ಗೆ ದೇವಿಗೆ ಅಭಿಷೇಕ, ವಿಶೇಷ ಪೂಜೆ ಮತ್ತು ಉಡಿ ತುಂಬಿದರು. ರಥದಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ರಥೋತ್ಸವವು ವಿವಿಧ ವಾದ್ಯಗಳೊಂದಿಗೆ ಪ್ರಾರಂಭವಾಯಿತು. ರಥದೊಂದಿಗೆ ಲಕ್ಷ್ಮೀದೇವಿ ಪಲ್ಲಕ್ಕಿಯೊಂದಿಗೆ ಕೆರೆಸಿದ್ದೇಶ್ವರ, ಹನಮಂತದೇವರು ಮತ್ತು ಅಮೋಘಸಿದ್ಧ ಪಾಲಕಿಗಳಿಗೆ ಭಕ್ತರು ಸೇವೆ ಮಾಡಿದರು.</p>.<p> ಭಕ್ತರು ‘ಜೈ ಲಕ್ಷ್ಮೀದೇವಿ’ ಎಂದು ಜೈಕಾರ ಹಾಕಿ ದೇವಿಗೆ ಭಂಡಾರ ಹಾರಿಸಿ ಆಡಿದ ಹೊನ್ನಾಟವು ಇಡೀ ಜಾತ್ರೆಗೆ ಕಳೆಕಟ್ಟಿತ್ತು. ಸೇರಿದ ಭಕ್ತರೆಲ್ಲ ಭಂಡಾರದಲ್ಲಿ ಮಿಂದೆದ್ದರು. ಭಂಡರಾದ ಓಕುಳಿಯಲ್ಲಿ ಇಡೀ ಗ್ರಾಮವು ಭಂಡಾರಮಯವಾಗಿತ್ತು. ದೇವಿಗೆ ಹೂವು, ಹಣ್ಣು, ಕಾಯಿ, ಬತ್ತಾಸು ಅರ್ಪಿಸಿದರು.</p>.<p>ಮಧ್ಯಾಹ್ನ ರಥವನ್ನು ಹುಣಸೆ ಬಣದ ಕೆರೆಸಿದ್ಧೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಂಡರು. ದೇವಿಗೆ ಅಣ್ಣನಾಗಿರುವ ಕೆರೆಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ರಂಗೋಲಿ ಚಿತ್ತಾರದ ಅಲಂಕಾರದ ಮಧ್ಯದಲ್ಲಿ ದೇವಿಗೆ ಉಡಿ ತುಂಬಿದ ನಂತರ ದೇವಿ ರಥ ಮರಳಿ ಲಕ್ಷ್ಮೀದೇವಿ ದೇವಸ್ಥಾನ ತಲುಪಿತು. </p>.<p>ಜಾತ್ರೆ ಅಂಗವಾಗಿ ಬೆಳಿಗ್ಗೆಯಿಂದ ಆರಂಭವಾದ ಅನ್ನಸಂತರ್ಪಣೆಯಲ್ಲಿ ಜಾತ್ಯತೀತವಾಗಿ ಎಲ್ಲರೂ ಭಾಗವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>