‘ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದಲ್ಲಿ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್ (ಸ್ವಾಮಿ), ನನಗೆ ಗೊತ್ತಿರುವಂತೆ ಚಿತ್ರದುರ್ಗದ ಮಠವೊಂದರಲ್ಲಿ ಸ್ವಾಮಿಯಾಗಿದ್ದ. ಆ ಮಠದಿಂದ ಹೊರ ಹಾಕಿದ್ದರು. ಬಳಿಕ ಬೆಂಗಳೂರಿಗೆ ಬಂದು ನೆಲೆಸಿ, ಆರ್ಎಸ್ಎಸ್ ಮುಖಂಡ ಎಂದು ಹೇಳಿಕೊಂಡಿದ್ದರು. ಬಿಜೆಪಿಯ ಅನೇಕ ಮುಖಂಡರನ್ನು ಭೇಟಿಯಾಗಿ ಫೋಟೊ ತೆಗೆಸಿಕೊಂಡಿದ್ದರು. ನನಗೂ ಒಮ್ಮೆ ಮಾಲೆ ಹಾಕಿ ಶುಭಾಶಯ ಕೋರಿದ್ದರು. ಯಾರಾದರೂ ಬಂದು ಶುಭ ಕೋರಿದಾಗ, ಸಹಜವಾಗಿಯೇ ಸ್ವೀಕರಿಸುತ್ತೇವೆ. ಆದರೆ, ಆತನಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.