ವೇದಿಕೆಯಲ್ಲಿದ್ದ ನಿರಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮಿ, ‘ಮುಂಬರುವ ದಿನಗಳಲ್ಲಿ ಈ ಸರ್ಕಾರ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರವರ್ಗ 2ಎ ಮೀಸಲಾತಿ ನೀಡುತ್ತಾರೆಂಬ ವಿಶ್ವಾಸವಿದೆ. ಅವರು ಕೊಡಲಿಲ್ಲವಾದರೆ ಮುಂದೆ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತದೆ. ಆಗ ನಾವು ಮೀಸಲಾತಿ ನೀಡಿಯೇ ತೀರುತ್ತೇವೆ. ಈ ಸರ್ಕಾರ ಮಾಡದಿದ್ದರೆ ಮುಂದಿನ ಸರ್ಕಾರದಲ್ಲಿ ನಾವು ಮಾಡಿಸ್ತೀವಿ. ಇದು ಅಣ್ಣನಿಗೆ ತಂಗಿಯ ಸವಾಲು’ ಎಂದರು ಹೇಳಿದರು.