ತಾಲ್ಲೂಕಿನ ಖನಗಾವ ಗ್ರಾಮದ ಸಿದರಾಯಿ ಲಕ್ಷ್ಮಣ ನಿಲಜಕರ್(38) ಅವರಿಗೆ ಚಿರತೆ ದಾಳಿಯಿಂದ ಚಿಕ್ಕ ಗಾಯವಾಗಿದೆ. ಆದರೆ, ಪುತ್ರನ ಮೇಲೆ ಚಿರತೆ ದಾಳಿ ಮಾಡಿದ ಎಂಬ ಸುದ್ದಿ ಕೇಳಿದ ಅವರ ತಾಯಿ ಶಾಂತಾ ನಿಲಜಕರ್(65) ಮನೆಯಲ್ಲಿ ಕುಸಿದುಬಿದ್ದರು. ತಪಾಸಣೆ ನಡೆಸಿದ ವೈದ್ಯರು ಅವರು ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು.