ಬೋನಿನಲ್ಲಿ ಕೂಡ್ರಿಸಲಾಗಿತ್ತು: ‘ಚಿರತೆ ಸೆರೆಗಾಗಿ ಇಲ್ಲಿ ಏಳು ಬೋನು ಅಳವಡಿಸಲಾಗಿದೆ. ಮಂಗಳವಾರ ರಾತ್ರಿ 10ರಿಂದ ಬುಧವಾರ ಬೆಳಿಗ್ಗೆ 7ರವರೆಗೆ ಬೋನಿನಲ್ಲಿ ಅರವಳಿಕೆ ಚುಚ್ಚುಮದ್ದು ನೀಡುವ ತಜ್ಞ ನಿಖಿಲ್ ಕುಲಕರ್ಣಿ ಅವರನ್ನು ಕೂಡ್ರಿಸಲಾಗಿತ್ತು. ಆದರೆ, ಚಿರತೆ ಇತ್ತ ಸುಳಿದಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.