‘ನವೆಂಬರ್ 23ರಂದು ರಾತ್ರಿ 7.23ಕ್ಕೆ ಜವಳಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಡಾ.ಸಂತೋಷ್ ಮರೇದ್ ಮತ್ತು ಡಾ.ಅಂಜಲಿ ಚಿಕ್ಕೋಡಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ರೋಗಿಯು ಚೇತರಿಸಿಕೊಂಡಿದ್ದು, ನ.26ರಂದು ಆಸ್ಪತ್ರೆಯಿಂದ ಬಿಡುಗಡೆ ಆಗಬೇಕಿತ್ತು. ಅಂದೇ ಸಂಜೆ 6.30ಕ್ಕೆ ಟಿಳಕವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಆಸ್ಪತ್ರೆ ಪ್ರವೇಶಿಸಿ, ನಮ್ಮ ಅನುಮತಿಯಿಲ್ಲದೇ, ಬಲವಂತವಾಗಿ ರೋಗಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಿಲ್ ಪಾವತಿಸುವವರೆಗೂ ಕಾಯಲಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ, ಚಿಕಿತ್ಸೆ ವೆಚ್ಚ ಭರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.