‘ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಪ್ರತಿನಿಧಿಗಳು ತಮ್ಮ ಪ್ರದೇಶದಲ್ಲಿ ದಿನವೂ ಸಂಚರಿಸಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಲಾಕ್ಡೌನ್ ಉಲ್ಲಂಘಿಸದಂತೆ ತಿಳಿಸಬೇಕು. ಬಡ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಜೀವನಾವಶ್ಯ ವಸ್ತುಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿದೇ, ನ್ಯಾಯಯುತ ಬೆಲೆಗೆ ಮಾರಬೇಕು’ ಎಂದು ಕೋರಿದರು.