ಹಿರೇಬಾಗೇವಾಡಿ (ಬೆಳಗಾವಿ): ಇಲ್ಲಿನ ಬಸವನಗರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಲಾರಿಯ ಟೈರ್ ಒಡೆದು, ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಚಾಲಕ ಮತ್ತು ಕ್ಲೀನರ್ಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಲಾರಿಯಲ್ಲಿ ಪಂಜಾಬಿನಿಂದ ಹುಬ್ಬಳ್ಳಿಗೆ ಸೇಬು ಹಣ್ಣು ಸಾಗಿಸಲಾಗುತ್ತಿತ್ತು. ಲಾರಿ ಪಲ್ಟಿ ಹೊಡೆದು ಬಿದ್ದ ಕಾರಣ ಅಪಾರ ಪ್ರಮಾಣದ ಸೇಬು ಹಣ್ಣು ನಾಶವಾದವು.
ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.