ಸುಪ್ರಿತಾ ಅವರನ್ನು ಬಾಲ್ಯದಲ್ಲಿಯೇ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಈ ವಿವಾಹ ತಮಗೆ ಇಷ್ಟವಿಲ್ಲ, ತನ್ನನ್ನು ಈ ಮದುವೆ ಬಂಧದಿಂದ ಮುಕ್ತಗೊಳಿಸಿ ಎಂದು ಸುಪ್ರಿತಾ ಐಗಳಿ ಠಾಣೆಯಲ್ಲಿ ಲಿಖಿತ ಅರ್ಜಿ ನೀಡಿದ್ದರು. ವಿಜಯಪುರದ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷಕನಾಗಿರುವ ಅಲ್ಲಾಭಕ್ಷ ಜೊತೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.