ಸೇತುವೆ ಕುಸಿತದ ವಿಷಯ ತಿಳಿದ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಲೋಕೋಪಯೋಗಿ ಇಲಾಖೆ ಎಸ್ಇ ಪಿ.ವೈ. ಪವಾರ, ಚಿಕ್ಕೋಡಿಯ ಎಇ ವಿ.ಎನ್. ಪಾಟೀಲ, ಎಇಇ ಆರ್.ಎ. ಗಾಣಿಗೇರ ಪರಿಶೀಲಿಸಿದರು.