<p>ಬೆಳಗಾವಿ: ‘ಪಕ್ಷ ನಿಷ್ಠೆ, ಹಿಂದುತ್ವ, ಹಿರಿತನ ಮೊದಲಾದವು ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಲೆಕ್ಕಕ್ಕೆ ಬರುವುದಿಲ್ಲ’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ನನ್ನ ಕ್ಷೇತ್ರದಲ್ಲಿರುವಷ್ಟು ಬಿಜೆಪಿ ಕಾರ್ಯಕರ್ತರು ಬೇರಾವ ಕ್ಷೇತ್ರದಲ್ಲೂ ಇಲ್ಲ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿಲ್ಲ; ಹೇಳಿಕೆ ಕೊಡಲಿಲ್ಲ. ಶಿಸ್ತು ಪಾಲಿಸಿದ್ದಾರೆ. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ. ಹೀಗಾಗಿ, ಹೈಕಮಾಂಡ್ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ’ ಎಂದರು.</p>.<p>‘ನನಗೂ ಎಲ್ಲ ರೀತಿಯ ದಂಡಯಾತ್ರೆ ಗೊತ್ತಿದೆ. ಆದರೆ, ಇಚ್ಛೆ ಇಲ್ಲ. ಸುಮ್ಮನಿರುವುದು ದೌರ್ಬಲ್ಯವೂ ಅಲ್ಲ. ಸಾಮರ್ಥ್ಯ ಅಥವಾ ಶಕ್ತಿ ಇಲ್ಲವೆಂದೇನಲ್ಲ; ಎಲ್ಲವೂ ಇದೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ರಾಜ್ಯದ ಇತರ ಕಡೆಗಳಲ್ಲಿನ ರಾಜಕೀಯವೇ ಬೇರೆ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ರಾಜಕೀಯ ಪರಿಸ್ಥಿತಿಯೇ ಬೇರೆ. ಗಡಿಯಲ್ಲಿ ಎಂತಹ ರಾಜಕೀಯ ಪರಿಸ್ಥಿತಿ ಇದ್ದರೂ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಇದನ್ನು ಬಹಳಷ್ಟು ಜನರು ಗಮನಕ್ಕೆ ತಗೆದುಕೊಂಡಿಲ್ಲ’ ಎಂದರು.</p>.<p>‘ಕಾರ್ಯಕರ್ತರು ಬೇಸರ ವ್ಯಕ್ತಪಡಿಸುವುದು ಸಹಜ. ಯೋಗ್ಯರು, ಸಮರ್ಥರು, ಕಳಂಕರಹಿತರ ನೇಮಕಕ್ಕೆ ನಾಯಕರು ಮಾಡಿರುವ ನಿರ್ಧಾರ ಸ್ವಾಗತಿತ್ತೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ಪಕ್ಷ ನಿಷ್ಠೆ, ಹಿಂದುತ್ವ, ಹಿರಿತನ ಮೊದಲಾದವು ಒಮ್ಮೊಮ್ಮೆ ಅನಿವಾರ್ಯ ಕಾರಣದಿಂದ ಲೆಕ್ಕಕ್ಕೆ ಬರುವುದಿಲ್ಲ’ ಎಂದು ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ನನ್ನ ಕ್ಷೇತ್ರದಲ್ಲಿರುವಷ್ಟು ಬಿಜೆಪಿ ಕಾರ್ಯಕರ್ತರು ಬೇರಾವ ಕ್ಷೇತ್ರದಲ್ಲೂ ಇಲ್ಲ. ಆದರೆ, ನನಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟಿಸಿಲ್ಲ; ಹೇಳಿಕೆ ಕೊಡಲಿಲ್ಲ. ಶಿಸ್ತು ಪಾಲಿಸಿದ್ದಾರೆ. ಪಕ್ಷ ನಮಗೆ ಬಹಳಷ್ಟು ಕೊಟ್ಟಿದೆ. ಹೀಗಾಗಿ, ಹೈಕಮಾಂಡ್ ತೀರ್ಮಾನದ ಬಗ್ಗೆ ಮಾತನಾಡುವುದಿಲ್ಲ’ ಎಂದರು.</p>.<p>‘ನನಗೂ ಎಲ್ಲ ರೀತಿಯ ದಂಡಯಾತ್ರೆ ಗೊತ್ತಿದೆ. ಆದರೆ, ಇಚ್ಛೆ ಇಲ್ಲ. ಸುಮ್ಮನಿರುವುದು ದೌರ್ಬಲ್ಯವೂ ಅಲ್ಲ. ಸಾಮರ್ಥ್ಯ ಅಥವಾ ಶಕ್ತಿ ಇಲ್ಲವೆಂದೇನಲ್ಲ; ಎಲ್ಲವೂ ಇದೆ’ ಎಂದು ಪ್ರತಿಕ್ರಿಯಿಸಿದರು.</p>.<p>‘ರಾಜ್ಯದ ಇತರ ಕಡೆಗಳಲ್ಲಿನ ರಾಜಕೀಯವೇ ಬೇರೆ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ರಾಜಕೀಯ ಪರಿಸ್ಥಿತಿಯೇ ಬೇರೆ. ಗಡಿಯಲ್ಲಿ ಎಂತಹ ರಾಜಕೀಯ ಪರಿಸ್ಥಿತಿ ಇದ್ದರೂ ರಾಜ್ಯದ ಹಿತ ಕಾಪಾಡುವ ಕೆಲಸ ಮಾಡಿದ್ದೇವೆ. ಇದನ್ನು ಬಹಳಷ್ಟು ಜನರು ಗಮನಕ್ಕೆ ತಗೆದುಕೊಂಡಿಲ್ಲ’ ಎಂದರು.</p>.<p>‘ಕಾರ್ಯಕರ್ತರು ಬೇಸರ ವ್ಯಕ್ತಪಡಿಸುವುದು ಸಹಜ. ಯೋಗ್ಯರು, ಸಮರ್ಥರು, ಕಳಂಕರಹಿತರ ನೇಮಕಕ್ಕೆ ನಾಯಕರು ಮಾಡಿರುವ ನಿರ್ಧಾರ ಸ್ವಾಗತಿತ್ತೇನೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>