<p><strong>ಮೂಡಲಗಿ:</strong> ‘ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ನಿಲ್ದಾಣ ಅಧಿಕಾರಿಗಳು, ಮೂಡಲಗಿಯ ನಿಸರ್ಗ ಫೌಂಡೇಶನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಬಸ್ ಚಾಲಕರನ್ನು ಶಾಲು ಹೊದಿಸಿ, ಸಿಹಿ ವಿತರಿಸಿ ಅವರನ್ನು ಗೌರವಿಸುವ ಮೂಲಕ ಬಸ್ ಚಾಲಕರ ದಿನಾಚರಣೆಯನ್ನು ಆಚರಿಸಿದರು.</p>.<p>ಸಾರಿಗೆ ಇಲಾಖೆಯ ಚಾಲಕರಾದ ಎನ್.ಎಲ್. ನದಾಫ, ಬಾಬಾಸಾಹೇಬ ಕಾಂಬಳೆ, ಟಿ.ಎಸ್.ಬಿರಾದಾರ, ಎಂ.ಡಿ.ಹಿಪ್ಪರಗಿ, ಎ.ಎಂ.ಬಿಳೂಂಡಗಿ, ಎಸ್.ಎನ್.ಪಿರಜಾದೆ, ಎಸ್.ಎಸ್. ಟೊನಪೆ ಅವರನ್ನು ಸನ್ಮಾನಿಸಿದರು.</p>.<p>ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಬಿ.ಬಿ.ದಂಡಾಪೂರ ಮಾತನಾಡಿ, 'ಬಸ್ ಚಾಲಕರು ಹಗಲು, ರಾತ್ರಿ ಎನ್ನದೆ ತಮ್ಮ ಮನೆ, ಕಟುಂಬದಿಂದ ಇಡೀ ದಿನ ದೂರವಿದ್ದು ಜನರನ್ನು ಸುಗಮವಾಗಿ ಅವರ ಸ್ಥಳಗಳಿಗೆ ತಲುಪಿಸುವಂತ ತ್ಯಾಗ ಮನೋಭಾವದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.</p>.<p>ಚಾಲಕರು ತಮ್ಮ ಕರ್ತವ್ಯದಲ್ಲಿ ಊಟ, ನಿದ್ರೆಯ ಚಿಂತೆ ಇಲ್ಲ. ಆರೋಗ್ಯವನ್ನು ಅನುಲಕ್ಷಿಸಿ ಮತ್ತು ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆಯಲ್ಲಿ ಜನರನ್ನು ಸುರಕ್ಷಿತವಾಗಿ ಒಯ್ಯುವಂತ ಅತ್ಯಂತ ದಕ್ಷತೆಯಿಂದ ಸೇವೆಯನ್ನು ಮಾಡುವರು. ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು ಆಗಿದ್ದಾರೆ ಎಂದರು.</p>.<p>ನಿಸರ್ಗ ಫೌಂಡೇಶನ್ದ ಅಧ್ಯಕ್ಷ ಈರಪ್ಪ ಢವಳೇಶ್ವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ, ಬಾಲಶೇಖರ ಬಂದಿ ಚಾಲಕರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭಕೋರಿದರು.</p>.<p>ನಿಲ್ದಾಣಧಾರಿ ಶ್ರೀಶೈಲ್ ದೇಸರಟ್ಟಿ, ಮಾರುತಿ ಹಡಪದ, ನಿವೃತ್ತ ನಿವರ್ಾಹಕ ಜೆ.ವಿ. ಮಾನೆ, ಸುರೇಶ ಭಜಂತ್ರಿ, ಸುರೇಶ ಮಡಿವಾಳರ, ಶಿವಬಸು ಮೋರೆ, ಸೈಫನ್ ಜಾತಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡಲಗಿ:</strong> ‘ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ನಿಲ್ದಾಣ ಅಧಿಕಾರಿಗಳು, ಮೂಡಲಗಿಯ ನಿಸರ್ಗ ಫೌಂಡೇಶನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಬಸ್ ಚಾಲಕರನ್ನು ಶಾಲು ಹೊದಿಸಿ, ಸಿಹಿ ವಿತರಿಸಿ ಅವರನ್ನು ಗೌರವಿಸುವ ಮೂಲಕ ಬಸ್ ಚಾಲಕರ ದಿನಾಚರಣೆಯನ್ನು ಆಚರಿಸಿದರು.</p>.<p>ಸಾರಿಗೆ ಇಲಾಖೆಯ ಚಾಲಕರಾದ ಎನ್.ಎಲ್. ನದಾಫ, ಬಾಬಾಸಾಹೇಬ ಕಾಂಬಳೆ, ಟಿ.ಎಸ್.ಬಿರಾದಾರ, ಎಂ.ಡಿ.ಹಿಪ್ಪರಗಿ, ಎ.ಎಂ.ಬಿಳೂಂಡಗಿ, ಎಸ್.ಎನ್.ಪಿರಜಾದೆ, ಎಸ್.ಎಸ್. ಟೊನಪೆ ಅವರನ್ನು ಸನ್ಮಾನಿಸಿದರು.</p>.<p>ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಬಿ.ಬಿ.ದಂಡಾಪೂರ ಮಾತನಾಡಿ, 'ಬಸ್ ಚಾಲಕರು ಹಗಲು, ರಾತ್ರಿ ಎನ್ನದೆ ತಮ್ಮ ಮನೆ, ಕಟುಂಬದಿಂದ ಇಡೀ ದಿನ ದೂರವಿದ್ದು ಜನರನ್ನು ಸುಗಮವಾಗಿ ಅವರ ಸ್ಥಳಗಳಿಗೆ ತಲುಪಿಸುವಂತ ತ್ಯಾಗ ಮನೋಭಾವದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.</p>.<p>ಚಾಲಕರು ತಮ್ಮ ಕರ್ತವ್ಯದಲ್ಲಿ ಊಟ, ನಿದ್ರೆಯ ಚಿಂತೆ ಇಲ್ಲ. ಆರೋಗ್ಯವನ್ನು ಅನುಲಕ್ಷಿಸಿ ಮತ್ತು ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆಯಲ್ಲಿ ಜನರನ್ನು ಸುರಕ್ಷಿತವಾಗಿ ಒಯ್ಯುವಂತ ಅತ್ಯಂತ ದಕ್ಷತೆಯಿಂದ ಸೇವೆಯನ್ನು ಮಾಡುವರು. ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು ಆಗಿದ್ದಾರೆ ಎಂದರು.</p>.<p>ನಿಸರ್ಗ ಫೌಂಡೇಶನ್ದ ಅಧ್ಯಕ್ಷ ಈರಪ್ಪ ಢವಳೇಶ್ವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ, ಬಾಲಶೇಖರ ಬಂದಿ ಚಾಲಕರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭಕೋರಿದರು.</p>.<p>ನಿಲ್ದಾಣಧಾರಿ ಶ್ರೀಶೈಲ್ ದೇಸರಟ್ಟಿ, ಮಾರುತಿ ಹಡಪದ, ನಿವೃತ್ತ ನಿವರ್ಾಹಕ ಜೆ.ವಿ. ಮಾನೆ, ಸುರೇಶ ಭಜಂತ್ರಿ, ಸುರೇಶ ಮಡಿವಾಳರ, ಶಿವಬಸು ಮೋರೆ, ಸೈಫನ್ ಜಾತಿಗಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>