ಗೌಂಡವಾಡದ ಕಾಲಭೈರವನಾಥ, ಲಕ್ಷ್ಮಿ, ಬಸವಣ್ಣ ದೇಗುಲಗಳಿಗೆ ಸೇರಿದೆ ಎನ್ನಲಾದ 27 ಎಕರೆ ಜಮೀನು ಇದೆ. ಇದನ್ನು ಕೆಲವರಿಗೆ ಉಳುಮೆಗೆ ನೀಡಿದ್ದು, ಹಲವು ವರ್ಷಗಳ ಹಿಂದೆಯೇ ಅವರು ತಮ್ಮ ಹೆಸರಿಗೆ ಜಮೀನು ಮಾಡಿಕೊಂಡಿದ್ದರು. ಒತ್ತುವರಿ ತೆರವು ಕೋರಿ ಸತೀಶ (ಕೊಲೆಯಾದವರು) ದಾವೆ ಹೂಡಿದ್ದರು. ಇದೇ 21ರಂದು(ಮಂಗಳವಾರ) ಕೋರ್ಟ್ನಲ್ಲಿ ಇದರ ವಿಚಾರಣೆ ನಿಗದಿಯಾಗಿದೆ.