ಮೂಡಲಗಿ: ಯುಗಾದಿ ಹಬ್ಬದಂದು ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳಲು ಮೂಡಲಗಿ, ಹಳ್ಳೂರ, ಗುರ್ಲಾಪುರ, ಮಸಗುಪ್ಪಿ, ತಿಗಡಿ, ಶಿವಾಪುರ, ಖಾನಟ್ಟಿ, ನಾಗನೂರ, ಕಲ್ಲೋಳಿ, ಯಾದವಾಡ ಗ್ರಾಮಗಳ ಭಕ್ತರು ಆಂಧ್ರಪ್ರದೇಶದ ಶ್ರೀಶೈಲದತ್ತ ಪಾದಯಾತ್ರೆ ಆರಂಭಿಸಿದ್ದಾರೆ. ‘ಮಲ್ಲಯ್ಯ ಮಲ್ಲಯ್ಯ ಸಿರಿಗಿರಿ ಮಲ್ಯಯ್ಯ ಉಘೇ, ಉಘೇ...’ ಎಂದು ಜೈಕಾರ ಕೂಗುತ್ತ, ಹೆಜ್ಜೆ ಹಾಕುತ್ತಿದ್ದಾರೆ.