ಈ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಡಿಸಿಪಿ ವಿಕ್ರಂ ಅಮಟೆ, ‘ಪಿಯುಸಿ ಓದಿರುವ ಆರೋಪಿಯು ಈ ಹಿಂದೆ ಡಯಗ್ನೋಸ್ಟಿದ್ರ ಕೇಂದ್ರವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರದಿಂದ ಆ ಕೇಂದ್ರ ಮುಚ್ಚಿತು. ಆದರೆ, ಆತ ನಿಯಮ ಬಾಹಿರವಾಗಿ ಪೀರನವಾಡಿಯಲ್ಲಿ ಅದೇ ಹೆಸರಿನಲ್ಲಿ ಸೆಂಟರ್ ತೆರೆದಿದ್ದ. ₹ 2,500ರಿಂದ ₹ 3ಸಾವಿರ ಪಡೆದು ಕೋವಿಡ್ ಪ್ರೊಫೈಲಿಂಗ್ ವರದಿ ನೀಡುತ್ತಿದ್ದ. ಸಿಪಿಐ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡದವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.