ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ | ಶಾಂತಿಯುತವಾಗಿ ಬಕ್ರೀದ್‌ ಆಚರಿಸಲು ಪೊಲೀಸ್‌ರಿಂದ ಮನವಿ

Published 27 ಜೂನ್ 2023, 15:35 IST
Last Updated 27 ಜೂನ್ 2023, 15:35 IST
ಅಕ್ಷರ ಗಾತ್ರ

ಖಾನಾಪುರ: ‘ಜೂನ್ 29ರಂದು ಬಕ್ರೀದ್‌ ಅನ್ನು ಸೌಹಾರ್ದ ಮತ್ತು ಶಾಂತಿಯುತವಾಗಿ ಆಚರಿಸಬೇಕು’ ಎಂದು ಖಾನಾಪುರ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ನಾಯ್ಕ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜರುಗಿದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಇತರರಿಗೆ ತೊಂದರೆ ಆಗದಂತೆ ಬಕ್ರೀದ್‌ ಆಚರಿಸಬೇಕು. ಸಮುದಾಯದ ಮುಖಂಡರು ಜವಾಬ್ದಾರಿಯುತವಾಗಿ ಇದನ್ನು ನಿಭಾಯಿಸಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ರವಿ ಕಾಡಗಿ, ಲಿಯಾಕಲಿ ಬಿಚ್ಚುನವರ, ಲಕ್ಷ್ಮಣ ಮಾದಾರ, ತೋಹಿದ ಚಾಂದನವರ, ಪ್ರಕಾಶ ದೇಶಪಾಂಡೆ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಜಯರಾಮ ಹಮ್ಮಣ್ಣವರ ನಿರ್ವಹಿಸಿದರು. ಶ್ರೀಕಾಂತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT