ಖಾನಾಪುರ: ‘ಜೂನ್ 29ರಂದು ಬಕ್ರೀದ್ ಅನ್ನು ಸೌಹಾರ್ದ ಮತ್ತು ಶಾಂತಿಯುತವಾಗಿ ಆಚರಿಸಬೇಕು’ ಎಂದು ಖಾನಾಪುರ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಜರುಗಿದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಇತರರಿಗೆ ತೊಂದರೆ ಆಗದಂತೆ ಬಕ್ರೀದ್ ಆಚರಿಸಬೇಕು. ಸಮುದಾಯದ ಮುಖಂಡರು ಜವಾಬ್ದಾರಿಯುತವಾಗಿ ಇದನ್ನು ನಿಭಾಯಿಸಬೇಕು’ ಎಂದು ಸೂಚಿಸಿದರು.
ಸಭೆಯಲ್ಲಿ ರವಿ ಕಾಡಗಿ, ಲಿಯಾಕಲಿ ಬಿಚ್ಚುನವರ, ಲಕ್ಷ್ಮಣ ಮಾದಾರ, ತೋಹಿದ ಚಾಂದನವರ, ಪ್ರಕಾಶ ದೇಶಪಾಂಡೆ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಜಯರಾಮ ಹಮ್ಮಣ್ಣವರ ನಿರ್ವಹಿಸಿದರು. ಶ್ರೀಕಾಂತ ವಂದಿಸಿದರು.