ಇದರ ಮಧ್ಯೆಯೇ ಗ್ರಾಮಸ್ಥರ ಇನ್ನೊಂದು ಗುಂಪು ಬೆಳವಡಿ ಸಂಸ್ಥಾನದ ರಾಜಗುರು ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರತಿಮೆ ಅನಾವರಣಕ್ಕೆ ಮುಂದಾಯಿತು. ಆಗ ಅಡ್ಡನಿಂತ ಜೆಡಿಎಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಸ್ಪರ ನೂಕಾಟ, ತಳ್ಳಾಟ, ಚೀರಾಟ ಆರಂಭವಾಯಿತು. ಇದೆಲ್ಲವನ್ನೂ ಜನಪ್ರತಿನಿಧಿಗಳು ಮೂಕಪ್ರೇಕ್ಷಕರಂತೆ ನಿಂತು ನೋಡಬೇಕಾಯಿತು.