<p><strong>ಬೆಳಗಾವಿ</strong>: ಇಲ್ಲಿನ ಸುವರ್ಣ ವಿಧಾನ ಸೌಧದ ಪಾವಿತ್ರ್ಯ ಹಾಳಾಗಿದೆ ಎಂದು ಆರೋಪಿಸಿ, ಸೋಮವಾರ ಶುದ್ಧೀಕರಣ ಮಾಡಲು ಮುಂದಾಗಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.</p>.<p>ಕಾಯಿ, ಕರ್ಪೂರ, ಹಾರ, ಊದುಬತ್ತಿ, ಅರಿಷಿನ–ಕುಂಕುಮ ಹಾಗೂ ನೀರು ತಂದಿದ್ದ ರೈತ ಮುಖಂಡರು, ಘೋಷಣೆ ಕೂಗುತ್ತ ಸುವರ್ಣ ಸೌಧ ಪ್ರವೇಶ ಮಾಡಲು ಯತ್ನಿಸಿದರು. 'ಅವಾಚ್ಯ ಪದಗಳ ಬಳಕೆಯಿಂದ ಸುವರ್ಣ ಸೌಧ ಮಲಿನಗೊಂಡಿದೆ. ಅದನ್ನು ಶುಚಿ ಮಾಡುತ್ತೇವೆ’ ಎಂದು ಘೋಷಣೆ ಕೂಗಿದರು.</p>.<p>ಪೊಲೀಸರು ಒಳಗೆ ಬಿಡದಿದ್ದಾಗ ಗೇಟ್ ಮುಂದೆಯೇ ಶುಚಿಗೊಳಿಸಲು ಮುಂದಾದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.</p>.<p>ಮುಖಂಡ ಪ್ರಕಾಶ ನಾಯಿಕ ನೇತೃತ್ವದಲ್ಲಿ ಸೋಮು ರೈನಾಪುರೆ, ಕಿಶನ್ ನಂದಿ, ಮೊಹಮ್ಮದ್ ಜೂಟದಾರ್, ಆಸ್ಮಾ ಜೂಟದಾರ್, ಸುರೇಶ ಮರಿಯಕಾಚೆ, ಈರಣ್ಣ ಹಣಮಂತಗೌಡ ಪಾಟೀಲ, ಸುರೇಶ ಪರಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಸುವರ್ಣ ವಿಧಾನ ಸೌಧದ ಪಾವಿತ್ರ್ಯ ಹಾಳಾಗಿದೆ ಎಂದು ಆರೋಪಿಸಿ, ಸೋಮವಾರ ಶುದ್ಧೀಕರಣ ಮಾಡಲು ಮುಂದಾಗಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.</p>.<p>ಕಾಯಿ, ಕರ್ಪೂರ, ಹಾರ, ಊದುಬತ್ತಿ, ಅರಿಷಿನ–ಕುಂಕುಮ ಹಾಗೂ ನೀರು ತಂದಿದ್ದ ರೈತ ಮುಖಂಡರು, ಘೋಷಣೆ ಕೂಗುತ್ತ ಸುವರ್ಣ ಸೌಧ ಪ್ರವೇಶ ಮಾಡಲು ಯತ್ನಿಸಿದರು. 'ಅವಾಚ್ಯ ಪದಗಳ ಬಳಕೆಯಿಂದ ಸುವರ್ಣ ಸೌಧ ಮಲಿನಗೊಂಡಿದೆ. ಅದನ್ನು ಶುಚಿ ಮಾಡುತ್ತೇವೆ’ ಎಂದು ಘೋಷಣೆ ಕೂಗಿದರು.</p>.<p>ಪೊಲೀಸರು ಒಳಗೆ ಬಿಡದಿದ್ದಾಗ ಗೇಟ್ ಮುಂದೆಯೇ ಶುಚಿಗೊಳಿಸಲು ಮುಂದಾದರು. ಆಗ ಪೊಲೀಸರು ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು.</p>.<p>ಮುಖಂಡ ಪ್ರಕಾಶ ನಾಯಿಕ ನೇತೃತ್ವದಲ್ಲಿ ಸೋಮು ರೈನಾಪುರೆ, ಕಿಶನ್ ನಂದಿ, ಮೊಹಮ್ಮದ್ ಜೂಟದಾರ್, ಆಸ್ಮಾ ಜೂಟದಾರ್, ಸುರೇಶ ಮರಿಯಕಾಚೆ, ಈರಣ್ಣ ಹಣಮಂತಗೌಡ ಪಾಟೀಲ, ಸುರೇಶ ಪರಗಣ್ಣವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>