ಕುರಿಗಳನ್ನು ಕಳೆದುಕೊಂಡಿರುವ ಕಡೋಲಿ ಗ್ರಾಮದ ಮಲ್ಲಪ್ಪ ಬೀರಪ್ಪ ಶಹಾಪೂರಕರ ಮಾತನಾಡಿ, ‘ನಾವು 150 ಕುರಿಗಳನ್ನು ಸಾಕಿದ್ದೇವೆ. ನಿತ್ಯವೂ ಮೇಯಿಸಲು ಹೋಗುತ್ತೇವೆ. ಹೀಗೆ ಹೋಗಿ ವಾಪಸಾಗುವಾಗ ಟಿಪ್ಪರ್ ಕುರಿಗಳ ಮೇಲೆ ವೇಗವಾಗಿ ಹರಿದು ಹೋಯಿತು. ಆಗ, 19 ಕುರಿಗಳು ಸ್ಥಳದಲ್ಲೇ ಸಾವಿಗೀಡಾದವು. 16 ಕುರಿಗಳಿಗೆ ಗಂಭೀರ ಗಾಯಗಳಾಗಿವೆ. 10 ಕುರಿಗಳು ಭಯದಲ್ಲಿ ಓಡಿಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಅವುಗಳನ್ನು ಮೇಯಿಸಲು ಹೋಗಿದ್ದ ಇಬ್ಬರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.