‘ಅಂಬೇಡ್ಕರ್ ಬರೆದ ಸಂವಿಧಾನ ಆಧರಿಸಿಯೇ ನ್ಯಾಯಾಂಗ ವ್ಯವಸ್ಥೆ ನಡೆಯುತ್ತದೆ. ಆದರೆ, ಅದನ್ನು ಗೌರವಿಸಬೇಕಾದ ನ್ಯಾಯಾಧೀಶರೇ ಅಪಮಾನ ಎಸಗಿರುವುದು ಅವರ ಮನೋಭಾವವನ್ನು ತೋರಿಸುತ್ತದೆ. ಅವರಿಗೆ ಪರಿಶಿಷ್ಟರ ಬಗೆಗಿರುವ ಮನಸ್ಥಿತಿಯೂ ವ್ಯಕ್ತವಾಗಿದೆ. ಇಂಥವರು ನ್ಯಾಯದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಾಗೂ ಪವಿತ್ರ ಸ್ಥಾನದಲ್ಲಿರಲು ಎಷ್ಟು ಯೋಗ್ಯ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.