‘ಹೊರ ರಾಜ್ಯಗಳಿಂದ ಜನರು ತಮ್ಮ ಊರುಗಳಿಗೆ ತೆರಳಲು ಸರ್ಕಾರ ಅನುಮತಿ ನೀಡಿದೆ. ಪರ ರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರನ್ನು ತಾಲ್ಲೂಕು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ ಅವರ ಮೇಲೆ ನಿಗಾ ವಹಿಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗುತ್ತದೆ. ಹೋಂ ಕ್ವಾರಂಟೈನ್ ಇರಬೇಕು ಎಂದು ಕೈಮೇಲೆ ಸೀಲ್ ಹಾಕುತ್ತಾರೆ. ಆದರೆ ಅದರಲ್ಲಿನ ಶಾಯಿಯನ್ನು ತಕ್ಷಣವೇ ಅಳಿಸಿಬಹುದಾಗಿದೆ. ಇದರಿಂದಾಗಿ ಕ್ವಾರಂಟೈನ್ ಇರಬೇಕಾದವರಿಗೆ ಅನುಕೂಲ ಆಗುತ್ತಿದೆ. ಅವರು ಎಲ್ಲಿ ಬೇಕಾದರೂ ಓಡಾಡುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ’ ಎಂದು ಜನರು ಆತಂಕ ವ್ಯಕ್ತಪಡಿಸಿದರು.