ಸಾವರಗಾಳಿ, ಸಂಗರಗಾಳಿ, ಗುಂಜಿ, ಶಿರೋಲಿ, ನೇರಸಾ, ಗಂಗವಾಳಿ, ಹರೂರಿ, ತಿವೋಲಿ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಭತ್ತದ ಗದ್ದೆಗಳು ಜಲಾವೃತವಾಗಿದೆ. ಜೂನ್ನಲ್ಲಿ ಬಿತ್ತನೆಯಾಗಿದ್ದ ಭತ್ತ ಆಗಸ್ಟ್ ಮಧ್ಯ ಭಾಗದಲ್ಲಿ ಸುರಿದ ಜಡಿ ಮಳೆಯಿಂದಾಗಿ ತೊಂದರೆಗೀಡಾಗಿತ್ತು. ನಂತರ ಬಿಸಿಲು ಬಿದ್ದಿದ್ದರಿಂದ ಪೈರುಗಳು ಸುಧಾರಣೆ ಕಂಡಿದ್ದವು. ಆದರೆ ಈಗ ಮತ್ತೆ ಮಳೆ ಕಾಡಿದೆ. ಪರಿಣಾಮ ತೆನೆ ಕಟ್ಟುವ ಹಂತದಲ್ಲಿರುವ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ಹೇಳುತ್ತಾರೆ.