<p>ಚನ್ನಮ್ಮನ ಕಿತ್ತೂರು: ‘ಅಲ್ಪ ಪ್ರಮಾಣದಲ್ಲಿ ಮಳೆಯಾದರೂ ಇಲ್ಲಿಯ ಸೋಮವಾರ ಪೇಟೆಯ ಕೊನೆಯಂಚಿನ ಮುಖ್ಯರಸ್ತೆ, ಬಸವೇಶ್ವರ ಕಾಲೊನಿಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತ ಆಗುತ್ತವೆ. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಎದುರು ಅಳಲು ತೋಡಿಕೊಂಡರು.</p>.<p>‘ಮಳೆಯಾದರೆ ಮೇಲಿಂದ ನೀರು ನುಗ್ಗಿ ಬರುತ್ತದೆ. ಹರಿದು ಹೋಗಲು ಆಸ್ಪದ ಇಲ್ಲದ್ದರಿಂದ ರಸ್ತೆ ಹಳ್ಳದಂತಾಗುತ್ತದೆ.ಇದರಿಂದ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಿತ್ತೂರು-ತಡಕೋಡ ರಸ್ತೆ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಲೋಕೋಪಯೋಗಿ ಎಇಇ ಸಂಜೀವ ಮಿರಜಕರ ಮಾತನಾಡಿ, ‘ರಸ್ತೆಯಿಂದ ಮುಂದೆ ನೀರು ಹರಿಯಲು ಅವಕಾಶ ಇಲ್ಲ. ಅಕ್ಕಪಕ್ಕ ಖಾಸಗಿ ವ್ಯಕ್ತಿಗಳ ಜಮೀನುಗಳಿವೆ. ಅವರು ಭೂಮಿ ನೀಡಿದರೆ ಮಳೆಯ ನೀರನ್ನು ಮುಂದೆ ಹರಿದು ಹೋಗುವಂತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.</p>.<p>ಎಸ್.ಬಿ.ವಾಳದ, ಚಂದ್ರಕಾಂತ ಆರೇರ, ಮಡಿವಾಳಪ್ಪ ಸರಪಳಿ, ಗಿರಿಮಲ್ಲಪ್ಪ ಹೊಸೆಟ್ಟಿ, ಶ್ರೀಕಾಂತ ಅವಲಕ್ಕಿ, ಗೋಪಾಲ ಪತಂಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚನ್ನಮ್ಮನ ಕಿತ್ತೂರು: ‘ಅಲ್ಪ ಪ್ರಮಾಣದಲ್ಲಿ ಮಳೆಯಾದರೂ ಇಲ್ಲಿಯ ಸೋಮವಾರ ಪೇಟೆಯ ಕೊನೆಯಂಚಿನ ಮುಖ್ಯರಸ್ತೆ, ಬಸವೇಶ್ವರ ಕಾಲೊನಿಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತ ಆಗುತ್ತವೆ. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಎದುರು ಅಳಲು ತೋಡಿಕೊಂಡರು.</p>.<p>‘ಮಳೆಯಾದರೆ ಮೇಲಿಂದ ನೀರು ನುಗ್ಗಿ ಬರುತ್ತದೆ. ಹರಿದು ಹೋಗಲು ಆಸ್ಪದ ಇಲ್ಲದ್ದರಿಂದ ರಸ್ತೆ ಹಳ್ಳದಂತಾಗುತ್ತದೆ.ಇದರಿಂದ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಿತ್ತೂರು-ತಡಕೋಡ ರಸ್ತೆ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.</p>.<p>ಲೋಕೋಪಯೋಗಿ ಎಇಇ ಸಂಜೀವ ಮಿರಜಕರ ಮಾತನಾಡಿ, ‘ರಸ್ತೆಯಿಂದ ಮುಂದೆ ನೀರು ಹರಿಯಲು ಅವಕಾಶ ಇಲ್ಲ. ಅಕ್ಕಪಕ್ಕ ಖಾಸಗಿ ವ್ಯಕ್ತಿಗಳ ಜಮೀನುಗಳಿವೆ. ಅವರು ಭೂಮಿ ನೀಡಿದರೆ ಮಳೆಯ ನೀರನ್ನು ಮುಂದೆ ಹರಿದು ಹೋಗುವಂತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.</p>.<p>ಎಸ್.ಬಿ.ವಾಳದ, ಚಂದ್ರಕಾಂತ ಆರೇರ, ಮಡಿವಾಳಪ್ಪ ಸರಪಳಿ, ಗಿರಿಮಲ್ಲಪ್ಪ ಹೊಸೆಟ್ಟಿ, ಶ್ರೀಕಾಂತ ಅವಲಕ್ಕಿ, ಗೋಪಾಲ ಪತಂಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>