<p><strong>ರಾಮದುರ್ಗ</strong>: ಇಲ್ಲಿನ ಬಾಣಕಾರ ಪೇಟೆಯ ಬನಶಂಕರಿ ದೇವಿ ಜಾತ್ರೆ ಈ ವರ್ಷ ಶತಮಾನದ ಸಂಭ್ರಮದಲ್ಲಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಫೆ.8ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. ಫೆ.12ರಂದು ಸಂಜೆ ವೈಭವದ 100ನೇ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.</p>.<p>ಪ್ರತಿವರ್ಷ ಭರತ ಹುಣ್ಣಿಮೆ ದಿನ ಸಂಜೆ ಇಲ್ಲಿ ಸಂಭ್ರಮದಿಂದ ಬನಶಂಕರಿ ರಥೋತ್ಸವ ನಡೆಯುತ್ತದೆ. ಪಟ್ಟಣದ ಏಳು ಪೇಟೆಗಳ ನೇಕಾರರ ಜತೆಗೆ, ಉಳಿದ ಸಮುದಾಯದವರು ತೇರು ಎಳೆದು ಸಂಭ್ರಮಿಸುತ್ತಾರೆ.</p>.<p>ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ, ಗ್ರಾಮದೇವಿ ಜಾತ್ರೆ ಮಾದರಿಯಲ್ಲೇ ಅದ್ದೂರಿಯಾಗಿ ಈ ಜಾತ್ರೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಶತಮಾನೋತ್ಸವ ಆಚರಣೆ ಸಮಿತಿಯವರು ವಿವಿಧ ಸಮಿತಿ ರಚಿಸಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸುವಲ್ಲಿ ನಿರತವಾಗಿದ್ದಾರೆ.</p>.<p>ಫೆ.8ರಿಂದ ನಾಲ್ಕು ದಿನ ನಡೆಯುವ ವಾಹನೋತ್ಸವ, 12ರಂದು ಜರುಗುವ ರಥೋತ್ಸವ ಮತ್ತು ಭಕ್ತರ ಪ್ರಸಾದಕ್ಕಾಗಿ ವಿವಿಧ ಖಾದ್ಯಗಳ ತಯಾರಿಕೆಗೆ ನೇಕಾರ ಸಮುದಾಯದವರು ಮುಂದಾಗಿದ್ದಾರೆ. ವಿವಿಧ ಆಟಿಕೆಗಳು, ಸಾಹಸ ಪ್ರದರ್ಶನಗಳು ಜಾತ್ರೆಗೆ ಮೆರುಗು ತಂದುಕೊಡಲಿವೆ. </p>.<p>ಫೆ.12ರಿಂದ 16ರ ವರೆಗೆ ಪ್ರತಿದಿನ ರಾತ್ರಿ ನಾಡಿನ ಹೆಸರಾಂತ ಕಲಾವಿದರಿಂದ ಮನರಂಜನೆ, ರಸಮಂಜರಿ, ಹಾಸ್ಯ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಜಾನಪದ ಕಲಾ ತಂಡದವರು ಜನರಿಗೆ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ. </p>.<p>ಜಾತ್ರೆ ಪ್ರಯುಕ್ತ ನೇಕಾರರು ತಮ್ಮ ಮನೆಗಳನ್ನು ಸುಣ್ಣ–ಬಣ್ಣದಿಂದ ಅಲಂಕರಿಸುತ್ತಿದ್ದಾರೆ. ಮನೆಗೆ ಬರುವ ಬೀಗರಿಗಾಗಿ ವಿಶೇಷ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ದೇವಸ್ಥಾನ ಮತ್ತು ರಥದ ಅಲಂಕಾರ ಪ್ರಕ್ರಿಯೆ ಭರದಿಂದ ಸಾಗಿದೆ.</p>.<p>ಜಾತ್ರೆಯ ಶತಮಾನೋತ್ಸವದ ಸವಿನೆನಪಿಗಾಗಿ ಸಮಿತಿಯವರು ನೇಕಾರ ಸಮುದಾಯ ಬಡವರನ್ನು ಗುರುತಿಸಿ, ಫೆ.16ರಂದು 21 ಜೋಡಿಗಳ ಸಾಮೂಹಿಕ ವಿವಾಹಕ್ಕೆ ನಿರ್ಧರಿಸಿರುವುದು ವಿಶೇಷ. </p>.<p>ಜಾತ್ರೆಗೆ ಬರುವ ಭಕ್ತರಿಗಾಗಿ ಸಿಹಿಯೂಟದ ವ್ಯವಸ್ಥೆ ಮಾಡಲಾಗಿದೆ. ಫೆ.13ರಂದು ಹುಗ್ಗಿ, 14ರಂದು ಸಜ್ಜಕ, 15ರಂದು ಬುಂದಿ, 16ರಂದು ಕರಿಗಡಬು ಉಣಬಡಿಸಲು ತೀರ್ಮಾನಿಸಲಾಗಿದೆ.</p>.<div><blockquote>ಶತಮಾನದಿಂದ ನಡೆಯುತ್ತಿರುವ ಜಾತ್ರೆಯಲ್ಲಿ ನೇಕಾರರ ಜತೆಗೆ ಉಳಿದ ಸಮಾಜದವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು</blockquote><span class="attribution">ನಾರಾಯಣಪ್ಪ ಬೆನ್ನೂರ, ಅಧ್ಯಕ್ಷ ಬನಶಂಕರಿ ದೇವಾಂಗ ಸಮಾಜ ರಾಮದುರ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮದುರ್ಗ</strong>: ಇಲ್ಲಿನ ಬಾಣಕಾರ ಪೇಟೆಯ ಬನಶಂಕರಿ ದೇವಿ ಜಾತ್ರೆ ಈ ವರ್ಷ ಶತಮಾನದ ಸಂಭ್ರಮದಲ್ಲಿದ್ದು, ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಫೆ.8ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. ಫೆ.12ರಂದು ಸಂಜೆ ವೈಭವದ 100ನೇ ರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.</p>.<p>ಪ್ರತಿವರ್ಷ ಭರತ ಹುಣ್ಣಿಮೆ ದಿನ ಸಂಜೆ ಇಲ್ಲಿ ಸಂಭ್ರಮದಿಂದ ಬನಶಂಕರಿ ರಥೋತ್ಸವ ನಡೆಯುತ್ತದೆ. ಪಟ್ಟಣದ ಏಳು ಪೇಟೆಗಳ ನೇಕಾರರ ಜತೆಗೆ, ಉಳಿದ ಸಮುದಾಯದವರು ತೇರು ಎಳೆದು ಸಂಭ್ರಮಿಸುತ್ತಾರೆ.</p>.<p>ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ, ಗ್ರಾಮದೇವಿ ಜಾತ್ರೆ ಮಾದರಿಯಲ್ಲೇ ಅದ್ದೂರಿಯಾಗಿ ಈ ಜಾತ್ರೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಶತಮಾನೋತ್ಸವ ಆಚರಣೆ ಸಮಿತಿಯವರು ವಿವಿಧ ಸಮಿತಿ ರಚಿಸಿದ್ದು, ಜಾತ್ರೆಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸುವಲ್ಲಿ ನಿರತವಾಗಿದ್ದಾರೆ.</p>.<p>ಫೆ.8ರಿಂದ ನಾಲ್ಕು ದಿನ ನಡೆಯುವ ವಾಹನೋತ್ಸವ, 12ರಂದು ಜರುಗುವ ರಥೋತ್ಸವ ಮತ್ತು ಭಕ್ತರ ಪ್ರಸಾದಕ್ಕಾಗಿ ವಿವಿಧ ಖಾದ್ಯಗಳ ತಯಾರಿಕೆಗೆ ನೇಕಾರ ಸಮುದಾಯದವರು ಮುಂದಾಗಿದ್ದಾರೆ. ವಿವಿಧ ಆಟಿಕೆಗಳು, ಸಾಹಸ ಪ್ರದರ್ಶನಗಳು ಜಾತ್ರೆಗೆ ಮೆರುಗು ತಂದುಕೊಡಲಿವೆ. </p>.<p>ಫೆ.12ರಿಂದ 16ರ ವರೆಗೆ ಪ್ರತಿದಿನ ರಾತ್ರಿ ನಾಡಿನ ಹೆಸರಾಂತ ಕಲಾವಿದರಿಂದ ಮನರಂಜನೆ, ರಸಮಂಜರಿ, ಹಾಸ್ಯ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ಜಾನಪದ ಕಲಾ ತಂಡದವರು ಜನರಿಗೆ ಸಂಗೀತದ ರಸದೌತಣ ಉಣಬಡಿಸಲಿದ್ದಾರೆ. </p>.<p>ಜಾತ್ರೆ ಪ್ರಯುಕ್ತ ನೇಕಾರರು ತಮ್ಮ ಮನೆಗಳನ್ನು ಸುಣ್ಣ–ಬಣ್ಣದಿಂದ ಅಲಂಕರಿಸುತ್ತಿದ್ದಾರೆ. ಮನೆಗೆ ಬರುವ ಬೀಗರಿಗಾಗಿ ವಿಶೇಷ ಖಾದ್ಯ ಸಿದ್ಧಪಡಿಸುತ್ತಿದ್ದಾರೆ. ದೇವಸ್ಥಾನ ಮತ್ತು ರಥದ ಅಲಂಕಾರ ಪ್ರಕ್ರಿಯೆ ಭರದಿಂದ ಸಾಗಿದೆ.</p>.<p>ಜಾತ್ರೆಯ ಶತಮಾನೋತ್ಸವದ ಸವಿನೆನಪಿಗಾಗಿ ಸಮಿತಿಯವರು ನೇಕಾರ ಸಮುದಾಯ ಬಡವರನ್ನು ಗುರುತಿಸಿ, ಫೆ.16ರಂದು 21 ಜೋಡಿಗಳ ಸಾಮೂಹಿಕ ವಿವಾಹಕ್ಕೆ ನಿರ್ಧರಿಸಿರುವುದು ವಿಶೇಷ. </p>.<p>ಜಾತ್ರೆಗೆ ಬರುವ ಭಕ್ತರಿಗಾಗಿ ಸಿಹಿಯೂಟದ ವ್ಯವಸ್ಥೆ ಮಾಡಲಾಗಿದೆ. ಫೆ.13ರಂದು ಹುಗ್ಗಿ, 14ರಂದು ಸಜ್ಜಕ, 15ರಂದು ಬುಂದಿ, 16ರಂದು ಕರಿಗಡಬು ಉಣಬಡಿಸಲು ತೀರ್ಮಾನಿಸಲಾಗಿದೆ.</p>.<div><blockquote>ಶತಮಾನದಿಂದ ನಡೆಯುತ್ತಿರುವ ಜಾತ್ರೆಯಲ್ಲಿ ನೇಕಾರರ ಜತೆಗೆ ಉಳಿದ ಸಮಾಜದವರು ಪಾಲ್ಗೊಂಡು ಯಶಸ್ವಿಗೊಳಿಸಬೇಕು</blockquote><span class="attribution">ನಾರಾಯಣಪ್ಪ ಬೆನ್ನೂರ, ಅಧ್ಯಕ್ಷ ಬನಶಂಕರಿ ದೇವಾಂಗ ಸಮಾಜ ರಾಮದುರ್ಗ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>