‘ಅಥಣಿ ತಾಲ್ಲೂಕಿಗೆ ನೀರಾವರಿ ಯೋಜನೆ ಕೊಡಲಿಲ್ಲ ಎನ್ನುವ ಕಾರಣಕ್ಕಾಗಿಯೇ ನಾನು ಕಾಂಗ್ರೆಸ್ ಬಿಟ್ಟೆ. ಆ ಪಕ್ಷದವರೊಂದಿಗೆ ಮುಖ್ಯ ಜಗಳ ಶುರುವಾಗಿದ್ದು ಅಥಣಿ ವಿಷಯದಿಂದಲೇ ಹೊರತು ಗೋಕಾಕದ ವಿಷಯಕ್ಕಲ್ಲ. ಈ ಕ್ಷೇತ್ರದ ಜನರು ಸಾರ್ವತ್ರಿಕ ಚುನಾವಣೆಯಲ್ಲಿ ನಮ್ಮ ಭರವಸೆ ನಂಬಿ ಮತ ಹಾಕಿದ್ದಾರೆ. ಇನ್ನೂ ಸಮಯವಿದೆ. ಬಿಜೆಪಿಯಿಂದಲೇ ಮಾಡಿಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.