‘ಬೆಳಿಗ್ಗೆ 7ರಿಂದ 10ರವರೆಗೆ ಮಾತ್ರ ಪಡಿತರ ಹಂಚಿಕೆ ಮಾಡುವಂತೆ ಸರ್ಕಾರ ತಿಳಿಸಿದೆ. ದ್ವಿಚಕ್ರವಾಹನದಲ್ಲಿ ಬರಕೂಡದು; ನಡೆದುಕೊಂಡು ಬರಬೇಕು, 10ಗಂಟೆಯೊಳಗೆ ತಮ್ಮ ವ್ಯವಹಾರ ಮುಗಿಸಬೇಕು ಎಂಬ ಎಚ್ಚರಿಕೆ ಅಂಗಡಿ ಮಾಲೀಕರನ್ನು ಚಿಂತೆಗೆ ಸಿಲುಕಿಸಿತ್ತು. ಅನೇಕ ಮಾಲೀಕರು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಹೋಗಬೇಕಾಗುತ್ತದೆ. ಅಲ್ಲಿವರೆಗೆ ನಡೆದುಕೊಂಡೇ ಹೋಗುವುದು ಹೇಗೆ ಎಂಬ ಪ್ರಶ್ನೆ ಉಂಟಾಗಿತ್ತು. ಈ ವಿಷಯ ಪ್ರಸ್ತಾಪಿಸಿದಾಗ ಆಯುಕ್ತರು ಸ್ಪಂದಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.