<p><strong>ಮುಗಳಖೋಡ</strong>: ‘ಗಡಿ ನಾಡಿನಲ್ಲಿ ದೇಸಿ ಕಲಾವಿದರ ಬದುಕು ಶೋಚನೀಯವಾಗಿದೆ’ ಎಂದು ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯ ಜಯಾನಂದ ಮಾದರ ಹೇಳಿದರು.</p>.<p>ಸಮಿಪದ ಹಂದಿಗುಂದ ಗ್ರಾಮದಲ್ಲಿ ಭಾನುವಾರ ಅನಾರೋಗ್ಯಪೀಡಿತವಾಗಿರುವ ಕಲಾವಿದ ಲಕ್ಕಪ್ಪ ಭೀಮಪ್ಪ ದೇವರವರ, ಹಲಗಿವಾದಕ ಭಾಸ್ಕರ ಅಜ್ಜಪ್ಪಗೊಳ, ಗೀಗಿಪದ ಕಲಾವಿದೆ ಮಹಾದೇವಿ ಬೋರವ್ವ ದೇವರವರ, ಗಂಗವ್ವ ಹುಲ್ಯಾಳ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಡ ಕಲಾವಿದರಿಗಿರುವ ಯೋಜನೆಗಳು, ವೈದ್ಯಕೀಯ ಸೌಲಭ್ಯ, ಮಾಸಾಶನ, ಕಲೆಗೆ ಬೇಕಾಗುವ ಪರಿಕರ ಸೌಲಭ್ಯಗಳ ಬಗ್ಗೆ ತಿಳಿಸಿದರು.</p>.<p>‘ಕಲಾವಿದ ಲಕ್ಕಪ್ಪ ಅವರ 8 ಮಂದಿಯ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಜೀವನ ನಿರ್ವಹಣೆಗೆ ಅವರು ಪರದಾಡುತ್ತಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.</p>.<p>‘ಕೋವಿಡ್–19 ಲಾಕ್ಡೌನ್ ವೇಳೆ ಬಡ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ₹ 2ಸಾವಿರ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಕಲಾವಿದರು ಜಯಾನಂದ ಅವರನ್ನು ಸನ್ಮಾನಿಸಿದರು. ಮುಖಂಡರಾದ ಬಸವರಾಜ ದೇವರವರ, ಚಿನ್ನಪ್ಪ ಗಗ್ಗರಿ, ಚನ್ನವೀರಯ್ಯ ಹಿರೇಮಠ, ರಾಜು ಪಾಟೀಲ, ಹನುಮವ್ವ ದೇವರವರ, ಕಾಶಪ್ಪ ಹೋಸಾಲಿ, ಪರುಶುರಾಮ ಮೇತ್ರಿ, ಡೇವಿಡ್ ಅಜ್ಜಪಗೋಳ, ಶಿವಾಜಿ ಮೇತ್ರಿ, ಮುತ್ತು ದೇವರವರ, ಸೌಂದರ್ಯ ದೇವರವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಗಳಖೋಡ</strong>: ‘ಗಡಿ ನಾಡಿನಲ್ಲಿ ದೇಸಿ ಕಲಾವಿದರ ಬದುಕು ಶೋಚನೀಯವಾಗಿದೆ’ ಎಂದು ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯ ಜಯಾನಂದ ಮಾದರ ಹೇಳಿದರು.</p>.<p>ಸಮಿಪದ ಹಂದಿಗುಂದ ಗ್ರಾಮದಲ್ಲಿ ಭಾನುವಾರ ಅನಾರೋಗ್ಯಪೀಡಿತವಾಗಿರುವ ಕಲಾವಿದ ಲಕ್ಕಪ್ಪ ಭೀಮಪ್ಪ ದೇವರವರ, ಹಲಗಿವಾದಕ ಭಾಸ್ಕರ ಅಜ್ಜಪ್ಪಗೊಳ, ಗೀಗಿಪದ ಕಲಾವಿದೆ ಮಹಾದೇವಿ ಬೋರವ್ವ ದೇವರವರ, ಗಂಗವ್ವ ಹುಲ್ಯಾಳ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಡ ಕಲಾವಿದರಿಗಿರುವ ಯೋಜನೆಗಳು, ವೈದ್ಯಕೀಯ ಸೌಲಭ್ಯ, ಮಾಸಾಶನ, ಕಲೆಗೆ ಬೇಕಾಗುವ ಪರಿಕರ ಸೌಲಭ್ಯಗಳ ಬಗ್ಗೆ ತಿಳಿಸಿದರು.</p>.<p>‘ಕಲಾವಿದ ಲಕ್ಕಪ್ಪ ಅವರ 8 ಮಂದಿಯ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಜೀವನ ನಿರ್ವಹಣೆಗೆ ಅವರು ಪರದಾಡುತ್ತಿದ್ದಾರೆ. ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.</p>.<p>‘ಕೋವಿಡ್–19 ಲಾಕ್ಡೌನ್ ವೇಳೆ ಬಡ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಲಾ ₹ 2ಸಾವಿರ ಹಾಗೂ ಆಹಾರ ಕಿಟ್ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.</p>.<p>ಕಲಾವಿದರು ಜಯಾನಂದ ಅವರನ್ನು ಸನ್ಮಾನಿಸಿದರು. ಮುಖಂಡರಾದ ಬಸವರಾಜ ದೇವರವರ, ಚಿನ್ನಪ್ಪ ಗಗ್ಗರಿ, ಚನ್ನವೀರಯ್ಯ ಹಿರೇಮಠ, ರಾಜು ಪಾಟೀಲ, ಹನುಮವ್ವ ದೇವರವರ, ಕಾಶಪ್ಪ ಹೋಸಾಲಿ, ಪರುಶುರಾಮ ಮೇತ್ರಿ, ಡೇವಿಡ್ ಅಜ್ಜಪಗೋಳ, ಶಿವಾಜಿ ಮೇತ್ರಿ, ಮುತ್ತು ದೇವರವರ, ಸೌಂದರ್ಯ ದೇವರವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>